ದೀಪ ಬೆಳಗಲು ಕರೆ ನೀಡಿದ ಪ್ರಧಾನಿ: ಅದು ನನ್ನಿಷ್ಟ, ಬೇಕೆಂದರೆ ನಾನು ನಿದ್ರಿಸುತ್ತೇನೆ ಎಂದ ಮಮತಾ ಬ್ಯಾನರ್ಜಿ!

ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಹಣತೆ, ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ಕೊಟ್ಟಿದ್ದಾರೆ. ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇ
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತ್ತಾ:  ಏಪ್ರಿಲ್ 5 ರಂದು ಪ್ರಧಾನಿ ನರೇಂದ್ರ ಮೋದಿ ಹಣತೆ, ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟಿನ ಪ್ರದರ್ಶನಕ್ಕೆ ಕರೆ ಕೊಟ್ಟಿದ್ದಾರೆ. ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ "ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇನೆ" ಎಂದಿದ್ದಾರೆ.

ಪ್ರಧಾನಮಂತ್ರಿಯ ಸಂದೇಶವನ್ನು ನಂಬುವವರು ಅವರ ಸೂಚನೆಗಳನ್ನು ಅನುಸರಿಸಬಹುದು ಎಂದು ಅವರು ಹೇಳಿದರು. “ಪ್ರಧಾನಿ ತಮ್ಮ ಮನಸ್ಸಿನಲ್ಲಿರುವುದನ್ನು ಮಾತಲ್ಲಿ ಹೇಳೀದ್ದಾರೆ. ನಾನು ನನ್ನ ಮಾತನ್ನು ಹೇಳುತ್ತೇನೆ. ನಾನು ಬೇರೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ…. ಪ್ರಧಾನಿ ಏನಾದರೂ ಒಳ್ಳೆಯದನ್ನು ಹೇಳಿದ್ದಾರೆ ಎಂದು ನೀವು ಭಾವಿಸಿದರೆ, ಅದನ್ನು ಅನುಸರಿಸಿ… ಇದು ವೈಯಕ್ತಿಕ ನಿರ್ಧಾರ, ”ಮಮತಾ ಹೇಳಿದರು.

“ನಾನು ಇತರ ಜನರ ವಿಷಯಗಳಲ್ಲಿ ಏಕೆ ಹಸ್ತಕ್ಷೇಪ ಮಾಡಬೇಕು? ನಾನು ಕೊರೋನಾವೈರಸ್ ಅನ್ನು ನಿಭಾಯಿಸಬೇಕೇ ಅಥವಾ ರಾಜಕೀಯ ಸ್ಪರ್ಧೆಯು ಹೆಚ್ಚಾಗಿದೆಯೆ? ಇದರಲ್ಲಿ ದಯವಿಟ್ಟು ರಾಜಕೀಯ ಸ್ಪರ್ಧೆಗೆ ಅವಕಾಶ ಕೊಡಬೇಡಿ.ಡಿ. ಪ್ರಧಾನಿ ಹೇಳಿದ್ದನ್ನು ಒಳ್ಳೆಯದು ಎಂದು ನೀವು ಭಾವಿಸಿದರೆ, ನೀವು ಅದನ್ನು ಅನುಸರಿಸುತ್ತೀರಿ. ನಾನು ನನ್ನಿಚ್ಚೆಯಂತೆ ಮಾಡುತ್ತೇನೆ. ಇಷ್ಟವಾದರೆ ಮಲಗುತ್ತೇನೆ. ಇದು ವೈಯಕ್ತಿಕ ವಿಷಯವಾಗಿದೆ, ”

ದೇಶದಲ್ಲಿ ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ರಾಜಕೀಯ ಸ್ಪರ್ಧೆಯನ್ನು  ಪ್ರಚೋದಿಸಬೇಡಿ ಎಂದು ಮಾಧ್ಯಮ ಗಳಿಗೆ ಮಮತಾ ವಿನಂತಿಸಿದ್ದಾರೆ.ಇದೀಗ ಪ್ರಸ್ತುತ ನಡೆಯುತ್ತಿರುವ ಲಾಕ್‌ಡೌನ್‌ನಿಂದಾಗಿ ಪಶ್ಚಿಮ ಬಂಗಾಳವು ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳ ನಷ್ಟಕ್ಕೆ ಸಿಲುಕಿದೆ ಎಂದ ಮಮತಾ  ತಮ್ಮ ಸರ್ಕಾರವು ನೌಕರರ ವೇತನವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ ಎಂಬ ಬಗ್ಗೆ ಖಚಿತವಾಗಿ ಹೆಮ್ಮೆ ಇದೆ ಎಂದಿದ್ದಾರೆ.

ಎರಡು ತಿಂಗಳ ಅವಧಿಗೆ ರಾಜ್ಯ ಸರ್ಕಾರ ಸಾಮಾಜಿಕ ಪಿಂಚಣಿಗೆಗಾಗಿ 35,10,200 ರೂ.ಬಿಡುಗಡೆ ಂಆಡಿದೆ. "ಈ ಕೆಲವು ದಿನಗಳ ಲಾಕ್‌ಡೌನ್‌ನಲ್ಲಿ ನಾವು ಎಷ್ಟು ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿದಿದೆಯೇ? ಹಲವಾರು ಸಾವಿರ ಕೋಟಿ…. ನಮಗೆ ಯಾವುದೇ ಗಳಿಕೆಯಿಲ್ಲ, ಆದರೆ ಕಳೆದುಕೊಳ್ಳುವುದು ಮಾತ್ರವೇ ಮುಂದುವರಿದಿದೆ.ತಿಂಗಳ ಮೊದಲ ದಿನದಂದು ಸಂಬಳವನ್ನು ಪಾವತಿಸಿದ ಏಕೈಕ ಸರ್ಕಾರ ನಮ್ಮದು. ಅವರು (ಉದ್ಯೋಗಿಗಳು) ಇಲ್ಲದಿದ್ದರೆ ಏನು ತಿನ್ನುತ್ತಾರೆ?" ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. “ನಮ್ಮಂತಹ 50,000 ಕೋಟಿ ರೂ.ಗಳ ಸಾಲವನ್ನು ಮರುಪಾವತಿಸುವ ಅಗತ್ಯವಿಲ್ಲದ ಅನೇಕ ರಾಜ್ಯಗಳಿವೆ, ಆದರೂ ಅವರ ಖಜಾನೆಗಳು ಖಾಲಿಯಾಗಿವೆ. ಉದ್ಯೋಗಿಗಳಿಗೆ ಪೂರ್ಣ ವೇತನವನ್ನು ಪಾವತಿಸಲಾಗದ  ಹಲವಾರು ರಾಜ್ಯಗಳಿವೆ ... ಕೆಲವರು ಕೇವಲ 40 ಪ್ರತಿಶತದಷ್ಟು ಮಾತ್ರ ಪಾವತಿಸಿದ್ದಾರೆ ... ನಾವು ಈ ಸಮಯದಲ್ಲಿ ಹೆಮ್ಮೆ ಪಡುತ್ತೇವೆ. "ಎಂದು ಅವರು ಹೇಳಿದರು.

ಕೋಲ್ಕತಾ ಮತ್ತು ರಾಜ್ಯದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂಬ ವರದಿಗಳನ್ನೂ ಅವರು ತಳ್ಳಿಹಾಕಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಅಕ್ಕಿ, ಗೋಧಿ ಮತ್ತು ದ್ವಿದಳ ಧಾನ್ಯಗಳ ವಿತರಣೆಯೊಂದಿಗೆ "ರಾಜಕೀಯದ ಆಟಆಡಲು" ಪ್ರಯತ್ನಿಸುತ್ತಿರುವ ಕೆಲವರು ಇದ್ದಾರೆ ಎಂದು ಯಾವ ರಾಜಕೀಯ ಪಕ್ಷದ ಹೆಸರು ಹೇಳದೆಯೆ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ನುಡಿದರು "ಕೇಂದ್ರವು ಅಕ್ಕಿಯನ್ನು ಒದಗಿಸಿದೆ ಎಂದು ಅವರು ಹೇಳುತ್ತಿದ್ದಾರೆ ... ಆದರೆ ಅದು ಹೇಗೆ ಸಾಧ್ಯ ... ಪಿಡಿಎಸ್ ಅನ್ನು ರಾಜ್ಯ ಸರ್ಕಾರವು ನಡೆಸುತ್ತಿದೆ"

ಇನ್ನೊಂದೆಡೆ ಮಮತಾ ಅವರ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ, ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರು ಮುಖ್ಯಮಂತ್ರಿ ನಿದ್ರಿಸುವ ಬಗೆಗೆ ಹೇಳಿರುವುದು ಆಕೆ ಇದಾಗಲೇ ನಿದ್ರೆಯಲ್ಲಿರುವುದನ್ನು ಸೂಚಿಸುತ್ತಿದೆಮತ್ತು ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಇಡೀ ದೇಶವು ಎಚ್ಚರವಾಗಿರುವಾಗ ಅವರು ಮಾತ್ರ ನಿದ್ರಿಸಲು ಮುಂದಾಗಬಹುದು ಎಂದಿದ್ದಾರೆ. ರೋಗದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಎಲ್ಲರಿಗೂ ಒಗ್ಗಟ್ಟಿನಿಂದ ಮಾರ್ಚ್ 22 ರಂದು ಚಪ್ಪಾಳೆ ತಟ್ಟುವಂತೆ ಪ್ರಧಾನಮಂತ್ರಿ ಹೇಳಿದಾಗಲೂ ತೃಣಮೂಲ ನಾಯಕರು ಟೀಕಿಸಿದ್ದಾರೆ ಎಂದು ಘೋಷ್ ಗಮನಸೆಳೆದರು, ಆದರೆ ದೇಶವು ಅವರ ಆಕ್ಷೇಪಣೆಯನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿ 9 ಗಂಟೆಗೆ ಹೆಚ್ಚು ನಿದ್ರೆ ಮಾಡುವುದನ್ನು ಮುಂದುವರಿಸಬಹುದು ಆದರೆ ಇಡೀ ದೇಶ ಎಚ್ಚರವಾಗಿರುತ್ತದೆ, ”ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com