ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.
ಕರ್ನಾಟಕದಲ್ಲಿ ಸುಗರಾಧಾನಾ ಯೋಜನೆ ನಡೆಸುತ್ತಿರುವ ಡಾ. ಕಾರ್ತಿಕ್ ನಾರಾಯಣ್ ಅವರ ಬೆಂಬಲದೊಂದಿಗೆ ಪೆಣುಕೊಂಡದ ಸಬ್ ಕಲೆಕ್ಟರ್ ಈ ಸೋಂಕು ನಿವಾರಕ ನಿರ್ಮಾಣಕ್ಕೆ ಗಮನ ಹರಿಸಿದ್ದಾರೆ.
ಹಿಂದೂಪುರದಲ್ಲಿಯೂ ಇಂತಹ ಮೂರು ಸೋಂಕು ನಿವಾರಕ ಸುರಂಗಗಳನ್ನು ನಿರ್ಮಿಸಲಾಗಿದೆ. ಈ ಸುರಂಗಗಳಲ್ಲಿ ಮಾರ್ಗದಲ್ಲಿ
ಸೋಡಿಯಂ ಹೈಪೋಕ್ಲೋರೈಟ್ ಬದಲಿಗೆ, ಸಿಟ್ರೊಬಿಯೊಶೀಲ್ಡ್ ದ್ರಾವಣವನ್ನು ಬಳಸಲಾಗುತ್ತದೆ.
ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಧೂಮಪಾನ ಸಂಬಂಧಿತ ರೋಗಿಗಳಿಗೆ ಪರಿಹಾರ ನೀಡುವಲ್ಲಿ ಈ ದ್ರಾವಣವನ್ನು ಬಳಸಲಾಗುತಿತ್ತು. ಇದನ್ನು ಜನರ ಮೇಲೆ ಸಿಂಪಡಿಸಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ತಿಳಿದುಬಂದಿದೆ.
ಸೋಡಿಯಂ ಹೈಪೋಕ್ಲೊರೈಟ್ ಬಳಕೆಯಿಂದ ಮೂಗಿನ ಸಮಸ್ಯೆ, ಗಂಟಲು ನೋವು, ಕೆಮ್ಮು, ಮತ್ತಿತರ ಸಮಸ್ಯೆಗಳು ಉಂಟಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ.
Advertisement