ಭೂಪಾಲ್: ಜಬಲ್ ಪುರದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತನನ್ನು ಎನ್ ಎಸ್ ಎ ಸಿಬ್ಬಂದಿ ಬಂಧಿಸಿದ್ದಾರೆ.
ಜಾವೇದ್ ಖಾನ್ ಬಂಧಿತ ಆರೋಪಿ, ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಪರಾರಿಯಾಗಿದ್ದವನನ್ನು ಸೋಮವಾರ ಬೆಳಗ್ಗೆ ಬಂಧಿಸಲಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಎಸ್ಕೇಪ್ ಆಗಿದ್ದ ಆರೋಪಿ ಜಬಲ್ ಪುರ ಹೊರವಲಯದಿಂದ ಯಾವುದೋ ಲಾರಿಯಲ್ಲಿ ನರಸಿಂಗಪುರ ತಲುಪಿದ್ದ. ಅಲ್ಲಿಂದ ಇಂದೋರ್ ಗೆ ಬೈಕ್ ನಲ್ಲಿ ತೆರಳಲು ಪ್ರಯತ್ನಿಸಿದ್ದ.
ಈ ಸಂಬಂಧ ಪೊಲೀಸರು ಎಲ್ಲೆಡೆ ಮಾಹಿತಿ ನೀಡಿದ್ದರಿಂದ ಆತನನ್ನು ಬಂಧಿಸಲು ಸಾಧ್ಯವಾಗಿದೆ. ಜಬಲ್ ಪುರದಿಂದ 80 ಕಿಮೀ ದೂರದಲ್ಲಿರುವ ಚೆಕ್ ಪೋಸ್ಚ್ ನಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
Advertisement