ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ಹರಡುತ್ತಿರುವ ನಡುವೆ ಬಿಜೆಪಿ ದೇಶದಲ್ಲಿ ಕೋಮು ವೈರಸ್ ಹರಡುತ್ತಿದೆ ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಆರೋಪ ಅತ್ಯಂತ ಕೀಳು, ಕೊಳಕು, ಬಾಲಿಷ ಎಂದು ಬಿಜೆಪಿ ತಿರುಗೇಟು ನೀಡಿದೆ.
ಸೋನಿಯಾ ಗಾಂಧಿ ಹೇಳಿಕೆಯನ್ನು 'ಕ್ಷುಲ್ಲಕ ರಾಜಕಾರಣ' ಎಂದು ಕರೆದಿರುವ ಬಿಜೆಪಿ, ಇಂತಹ ವಿಷಮ, ಸಂದಿಗ್ಧ ಸಂದರ್ಭದಲ್ಲಾದರೂ ರಾಜಕಾರಣವನ್ನು ಬಿಟ್ಟು ಉತ್ತಮ ಅಲೋಚನೆ ಮಾಡಲಿ ಎಂದೂ ಸಲಹೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸೋನಿಯಾ ಗಾಂಧಿ ಹೇಳಿಕೆ ಕಾಂಗ್ರೆಸ್ ಪಕ್ಷದ ಕೀಳು ಮಟ್ಟದ ರಾಜಕಾರಣಕ್ಕೆ ಉದಾಹರಣೆಯಾಗಿದೆ. ಸದ್ಯ ಕೊರೋನಾ ಹಾವಳಿ ತೊಲಗಿಸುವುದೇ ಸರ್ಕಾರ ಮತ್ತು ಬಿಜೆಪಿಯ ಏಕೈಕ ಗುರಿ, ಕಾಂಗ್ರೆಸ್ ಹಾಗೆ ರಾಜಕಾರಣದಲ್ಲಿ ತೊಡಗುವುದಲ್ಲ ಎಂದು ಜಾವಡೇಕರ್ ತಿರುಗೇಟು ನೀಡಿದ್ದಾರೆ.
Advertisement