ನವದೆಹಲಿ: ಸಾಲ ಮನ್ನ ಬೇಕೆ, ಲೆಕ್ಕ ಪುಸ್ತಕದಿಂದ ಅದನ್ನು ತೆಗೆದು ಹಾಕುವುದು ಬೇರೆಯಾಗಿದ್ದು, ಎರಡರ ವ್ಯತ್ಯಾಸ ತಿಳಿದುಕೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಬಳಿ ಟ್ಯೂಷನ್'ಗೆ ಹೋಗಲಿ ಎಂದು ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ಅವರು ಹೇಳಿದ್ದಾರೆ.
ಕೇಂದ್ರದ ಆಡಳಿತಾರೂಢ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ರೂ.65,000 ಕೋಟಿ ಸಾಲ ಮನ್ನಾ ಮಾಡಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ವ್ಯಂಗ್ಯವಾಡಿರುವ ಜವಡೇಕರ್ ಅವರು, ಸಾಲ ಮನ್ನಾ ಬೇಕೆ, ಲೆಕ್ಕ ಪುಸ್ತಕಗಳಿಂದ ಅದನ್ನು ತೆಗೆದು ಹಾಕುವುದೇ ಬೇರೆ ಎಂದು ವಿವರಿಸಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿಯವರು ಚಿದಂಬರಂ ಬಳಿ ಟ್ಯೂಷನ್ ತೆಗೆದುಕೊಳ್ಳಬೇಕಿದೆ. ಎರಡರ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
Advertisement