ವಿವಾದದ ಕಿಡಿ ಹೊತ್ತಿಸಿತು ಸುಶಾಂತ್ ಕುರಿತ ಅಮೃತಾ ಫಡ್ನವೀಸ್ ಟ್ವೀಟ್!  

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಬಗ್ಗೆ ಅಮೃತಾ ಫಡ್ನವೀಸ್ ಮಾಡಿರುವ ಟ್ವೀಟ್ ಈಗ ವಿವಾದಕ್ಕೆ ಗುರಿಯಾಗಿದೆ.
ವಿವಾದದ ಕಿಡಿ ಹೊತ್ತಿಸಿತು ಸುಶಾಂತ್ ಕುರಿತ ಅಮೃತಾ ಫಡ್ನವೀಸ್ ಟ್ವೀಟ್!
ವಿವಾದದ ಕಿಡಿ ಹೊತ್ತಿಸಿತು ಸುಶಾಂತ್ ಕುರಿತ ಅಮೃತಾ ಫಡ್ನವೀಸ್ ಟ್ವೀಟ್!

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಬಗ್ಗೆ ಅಮೃತಾ ಫಡ್ನವೀಸ್ ಮಾಡಿರುವ ಟ್ವೀಟ್ ಈಗ ವಿವಾದಕ್ಕೆ ಗುರಿಯಾಗಿದೆ.

ಸುಶಾಂತ್ ಸಿಂಗ್ ರಜ್ಪೂತ್ ಅವರ ಪ್ರಕರಣವನ್ನು ಇಲ್ಲಿನ ಪೊಲೀಸರು ನಿರ್ವಹಣೆ ಮಾಡುತ್ತಿರುವ ರೀತಿಯನ್ನು ಗಮನಿಸಿದರೆ ಮುಂಬೈ ತನ್ನ ಮಾನವಿಯತೆಯನ್ನು ಕಳೆದುಕೊಂಡಿದ್ದು ಜೀವಿಸುವುದಕ್ಕೆ ಸುರಕ್ಷಿತವಾಗಿಲ್ಲ ಎಂದು ನನಗನ್ನಿಸುತ್ತಿದೆ ಎಂದು ಅಮೃತ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ. 

ಈ ಟ್ವೀಟ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಶಿವಸೇನೆಯ ನಾಯಕರಿಂದ ಟೀಕೆಗೆ ಗುರಿಯಾಗಿದೆ. ಯಾವ ಪೊಲೀಸರಿಂದ ರಕ್ಷಣೆ ಪಡೆಯುತ್ತಿದ್ದಾರೋ ಅದೇ ಪೊಲೀಸರನ್ನು ಅಮೃತಾ ಫಡ್ನವೀಸ್ ಟೀಕೆ ಮಾಡುತ್ತಿದ್ದಾರೆ. 

ಶಿವಸೇನೆಯ ರಾಜ್ಯಸಭಾ ಸಂಸದರಾದ ಪ್ರಿಯಾಂಕ ಚತುರ್ವೇದಿ ಟ್ವಿಟರ್ ನಲ್ಲಿ ಅಮೃತಾ ಫಡ್ನವೀಸ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ಮುಂಬೈ ಪೊಲೀಸ್ ಭದ್ರತೆ ಹಾಗೂ ಕಾರಿನಲ್ಲೇ ಸುತ್ತುತ್ತಾರೆ ಎಂದು ಟೀಕಿಸಿದ್ದಾರೆ. ಮುಂಬೈ ಪೊಲೀಸರನ್ನು ದೂಷಿಸುತ್ತಿರುವವ ಬಿಜೆಪಿ ನಾಯಕರು ಪೊಲೀಸ್ ಭದ್ರತೆಯನ್ನು ಬಿಟ್ಟುಬಿಡಲಿ ಎಂದು ಚತುರ್ವೇದಿ ಸವಾಲು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com