ನವದೆಹಲಿ: ಕೊರೋನಾ ಸೇನಾನಿ ದಿವಂಗತ ಡಾ ಜೋಗಿಂದರ್ ಚೌಧರಿ ಕುಟುಂಬವನ್ನು ಸೋಮವಾರ ಭೇಟಿಯಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆರ್ಥಿಕ ಸಹಾಯವಾಗಿ 1 ಕೋಟಿ ರೂ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ಒಂದು ತಿಂಗಳ ಕಾಲ ಜೀವನ್ಮರಣದೊಂದಿಗೆ ಹೋರಾಡಿದ ನಂತರ 27 ವರ್ಷದ ಡಾ.ಚೌಧರಿ ಕಳೆದ ವಾರ ದೆಹಲಿಯಲ್ಲಿ ಕೊರೋನವೈರಸ್ಗೆ ಬಲಿಯಾಗಿದ್ದರು. ಜೂನ್ 28 ರಿಂದ ಡಾ. ಚೌಧರಿ ಸೋಂಕಿನೊಂದಿಗೆ ಹೋರಾಡುತ್ತಿದ್ದರು. ಡಾ. ಚೌಧರಿ ಕುಟುಂಬವನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಕೇಜ್ರಿವಾಲ್, ಡಾ. ಚೌಧರಿ ಅವರ ತ್ಯಾಗ ಮತ್ತು ದೆಹಲಿ ಜನರಿಗಾಗಿ ಮಾಡಿದ ತ್ಯಾಗಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಸತತ ಒಂದು ತಿಂಗಳು ಆಸ್ಪತ್ರೆಯಲ್ಲಿ ಕೊರೋನಾ ವಿರುದ್ಧ ಹೋರಾಡಿದ್ದ ಜೋಗಿಂದರ್
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಿಗಿಸಿಕೊಂಡಿದ್ದ ಡಾ. ಜೋಗಿಂದರ್ ಚೌಧರಿ ಅವರು ಸತತ ಒಂದು ತಿಂಗಳ ಕಾಲ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಆದರೆ ಅವರಿಗೆ ಜೂನ್ 27 ರಂದು ಚೌಧರಿ ಅವರಿಗೆ ಕೊರೋನಾ ದೃಢ ಪಟ್ಟಿತ್ತು, ಆರಂಭದಲ್ಲಿ ಅವರು ಸರ್ಕಾರಿ ಸ್ವಾಮ್ಯದ ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಧರು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಅಲ್ಲಿ ದುಬಾರಿ ಬಿಲ್ ಆಗಿತ್ತು. ಜೋಗಿಂದರ್ ಅವರ ಆಸ್ಪತ್ರೆ ಬಿಲ್ ಗಾಗಿ ಬಿಎಸ್ ಎ ಆಸ್ಪತ್ರೆ ವೈದ್ಯರು 3 ಲಕ್ಷ ರು. ಸಂಗ್ರಹಿಸಿ ನೀಡಿದ್ದರು, ಆದರೆ ಚೌಧರಿ ಅವರ ತಂದೆ ರೈತನಾಗಿದ್ದು, ಅವರಿಂದ ಅಷ್ಟು ಹಣ ಅವರಿಂದ ಭರಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ತಮ್ಮ ಬಳಿ ಅಷ್ಟು ಹಣವಿಲ್ಲ ತಮ್ಮ ಮಗನ ಬಿಲ್ ಮನ್ನ ಮಾಡಬೇಕೆಂದು ಚೌಧರಿ ತಂದೆ ಗಂಗಾರಾಮ್ ಆಸ್ಪತ್ರೆ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು, ಇದನ್ನು ಗಮನಿಸಿದ ಆಸ್ಪತ್ರೆ ಅವರ ಎಲ್ಲಾ ಬಿಲ್ ಮನ್ನಾ ಮಾಡಿತ್ತು. ಆದರೆ ತಿಂಗಳ ನಂತರ ವೈದ್ಯ ಬದುಕುಳಿಯಲಿಲ್ಲ, ಜೋಗಿಂದರ್ ಕೊರೋನಾ ವಿರುದ್ಧ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದರು.
Advertisement