ನವದೆಹಲಿ: ಬಿಹಾರದ ಶಾಸಕರೂ ಆಗಿರುವ ಸುಶಾಂತ್ ಸಿಂಗ್ ರಜಪೂತ್ ನ ಸಹೋದರ ಸಂಬಂಧಿ ಶಿವಸೇನೆ ನಾಯಕ ಸಂಜಯ್ ರಾವುತ್ ಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
ಶಿವಸೇನೆಯ ಮುಖವಾಣಿಯಲ್ಲಿ ಸಂಜಯ್ ರಾವುತ್ ನಟ ಸುಶಾಂತ್ ಸಿಂಗ್ ಅವರ ಬಗ್ಗೆ ಬರೆದಿದ್ದು, ಸುಶಾಂತ್ ಸಿಂಗ್ ಅವರ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ಸಂಜಯ್ ರಾವುತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೊಟೀಸ್ ಕಳಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ತಮ್ಮ ತಂದೆ ಎರಡನೇ ವಿವಾಹವಾದ ಬಳಿಕ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಬರೆದಿದ್ದರು.
"ಸಂಜಯ್ ರಾವುತ್ ಓರ್ವ ಜವಾಬ್ದಾರಿಯುತ ಸಂಸತ್ ಸದಸ್ಯ ಹಾಗೂ ಜವಾಬ್ದಾರಿಯುತ ಪಕ್ಷದ ವಕ್ತಾರಾಗಿದ್ದು, ಇಂತಹ ಆಧಾರ ರಹಿತ ನನ್ನ ಕಕ್ಷಿದಾರರಾದ ನೀರಜ್ ಕುಮಾರ್ ಬಬ್ಲು ಅವರು ಸಂಜಯ್ ರಾವುತ್ ಅವರಿಂದ ಇನ್ನು 48 ಗಂಟೆಗಳಲ್ಲಿ ಕ್ಷಮೆಗೆ ಆಗ್ರಹಿಸಿದ್ದಾರೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
Advertisement