ಪೂರ್ವ ಲಡಾಕ್ ನಲ್ಲಿ ಚೀನಾವನ್ನು ಎದುರಿಸಲು ಭಾರತ ಭಯಪಡುತ್ತಿದೆ, ಇದಕ್ಕೆ ದೇಶ ಬೆಲೆ ತೆರಬೇಕಾಗುತ್ತದೆ:ರಾಹುಲ್ ಗಾಂಧಿ

ಪೂರ್ವ ಲಡಾಕ್ ನ ಸ್ಥಿತಿಗತಿಗೆ ಕೇಂದ್ರ ಸರ್ಕಾರದ ನಿಲುವುಗಳೇ ಕಾರಣ ಎಂದು ಮತ್ತೊಮ್ಮೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದಕ್ಕೆ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪೂರ್ವ ಲಡಾಕ್ ನ ಸ್ಥಿತಿಗತಿಗೆ ಕೇಂದ್ರ ಸರ್ಕಾರದ ನಿಲುವುಗಳೇ ಕಾರಣ ಎಂದು ಮತ್ತೊಮ್ಮೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದಕ್ಕೆ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಡಾಕ್ ನ ಚೀನಾದ ಉದ್ದೇಶ, ಗುರಿಯನ್ನು ಎದುರಿಸಲು ಭಾರತ ಸರ್ಕಾರ ಭಯಪಡುತ್ತಿದೆ. ಅಲ್ಲಿ ಚೀನಾ ತನ್ನ ಅಸ್ಥಿತ್ವವನ್ನು ಸಾಧಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಸಾಕ್ಷಿಗಳು ಹೇಳುತ್ತವ ಎಂದು ಹೇಳಿದ್ದಾರೆ.

ಪೂರ್ವ ಲಡಾಕ್ ನ ವಿಷಯದಲ್ಲಿ ಧೈರ್ಯದ ಕೊರತೆ ಮತ್ತು ಮಾಧ್ಯಮಗಳ ಮೌನದಿಂದಾಗಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com