ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐನಿಂದ ಸಿದ್ಧಾರ್ಥ್ ಪಠಾನಿ, ನೀರಜ್ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಯನ್ನೆದುರಿಸಲು ಅವರ ಜೊತೆ ವಾಸಿಸುತ್ತಿದ್ದ ಸುದ್ಧಾರ್ಥ್ ಪಿತಾನಿ ಮತ್ತು ಅಡುಗೆ ಕೆಲಸಗಾರ ನೀರಜ್ ಸಿಂಗ್ ಡಿಆರ್ ಡಿಒ ಗೆಸ್ಟ್ ಹೌಸ್ ಬಳಿ ಭಾನುವಾರ ಬೆಳಗ್ಗೆ ಆಗಮಿಸಿದರು.
ಸಿಬಿಐ ವಿಚಾರಣೆಗೆ ಆಗಮಿಸಿದ ಸಿದ್ಧಾರ್ಥ್ ಪಠಾನಿ
ಸಿಬಿಐ ವಿಚಾರಣೆಗೆ ಆಗಮಿಸಿದ ಸಿದ್ಧಾರ್ಥ್ ಪಠಾನಿ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಯನ್ನೆದುರಿಸಲು ಅವರ ಜೊತೆ ವಾಸಿಸುತ್ತಿದ್ದ ಸುದ್ಧಾರ್ಥ್ ಪಿತಾನಿ ಮತ್ತು ಅಡುಗೆ ಕೆಲಸಗಾರ ನೀರಜ್ ಸಿಂಗ್ ಡಿಆರ್ ಡಿಒ ಗೆಸ್ಟ್ ಹೌಸ್ ಬಳಿ ಭಾನುವಾರ ಬೆಳಗ್ಗೆ ಆಗಮಿಸಿದರು.

ಮುಂಬೈಯ ಕಲಿನಾದಲ್ಲಿರುವ ಅತಿಥಿ ಗೃಹಕ್ಕೆ ಇಬ್ಬರೂ ಇಂದು ಬೆಳಗ್ಗೆ ಪ್ರತ್ಯೇಕವಾಗಿ ಆಗಮಿಸಿದರು. ಸಿಬಿಐ ಅಧಿಕಾರಿಗಳು ಅವರ ವಿಚಾರಣೆ ನಡೆಸಿದ್ದಾರೆ.

ನಿನ್ನೆ ಸಿಬಿಐ ತಂಡ ನೀರಜ್, ಸುಶಾಂತ್ ಅವರ ಮತ್ತೊಬ್ಬ ಮನೆಗೆಲದವರಾಗಿದ್ದ ದೀಪೇಶ್ ಸಾವಂತ್ ಮತ್ತು ಪಿಠಾನಿಯವರೊಂದಿಗೆ ನಟ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಹೋಗಿ ಜೂನ್ 14ರಂದು ಮೃತಪಟ್ಟ ಹಿಂದಿನ ದಿನ ಏನೆಲ್ಲಾ ನಡೆದಿರಬಹುದೆಂದು ಸನ್ನಿವೇಶವನ್ನು ಮರುಸೃಷ್ಟಿಸಲು ಹೋಗಿದ್ದರು.

ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟಿದ್ದ ಸಮಯದಲ್ಲಿ ಈ ಮೂವರೂ ಅಪಾರ್ಟ್ ಮೆಂಟಿನಲ್ಲಿದ್ದರು ಎಂದು ಹೇಳಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಫ್ಲಾಟ್ ಗೆ ಆಗಮಿಸಿದ ಸಿಬಿಐ ತಂಡ ವಿಚಾರಣೆ ಮುಗಿಸಿ ಹೋಗುವಾಗ ರಾತ್ರಿ 8 ಗಂಟೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com