ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್ ವಿಧಿವಶ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ ಆರ್ ಲಕ್ಷ್ಮಣನ್ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.
ಎಆರ್ ಲಕ್ಷ್ಮಣನ್
ಎಆರ್ ಲಕ್ಷ್ಮಣನ್

ಚೆನ್ನೈ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ ಆರ್ ಲಕ್ಷ್ಮಣನ್ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.

78 ವರ್ಷದ ಲಕ್ಷ್ಮಣನ್ ತಿರುಚಿರಾಪಳ್ಳಿಯಲ್ಲಿ ನಿಧನರಾಗಿದ್ದು, ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬುಧವಾರ ಬೆಳಗ್ಗೆ 11 ಗಂಟೆಗೆ ಲಕ್ಷ್ಮಣನ್ ಅವರಿಗೆ ಹೃದಯಾಘಾತವಾಯಿತು,  ಕೂಡಲೇ ಅವರನ್ನು ಕಾರೈಕುಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಮಿಳುನಾಡು, ಸುಪ್ರೀಂ ಕೋರ್ಟ್‌ನಲ್ಲಿ ಮುಲ್ಲೈಪೆರಿಯಾರ್ ಅಣೆಕಟ್ಟು ಕುರಿತು ಅಧಿಕಾರ ಸಮಿತಿಯನ್ನು ಪ್ರತಿನಿಧಿಸುತ್ತಿದ್ದರು. 

ತಮ್ಮ ಪತ್ನಿ ನಿಧನರಾದ ಎರಡು ದಿನಗಳ ನಂತರ ಲಕ್ಷ್ಮಣನ್ ಕೂಡ ಸಾವನ್ನಪ್ಪಿದ್ದಾರೆ, ಆಗಸ್ಟ್ 24 ರಂದು ಲಕ್ಷ್ಮಣನ್ ಅವರ ಪತ್ನಿ ಮೀನಾಕ್ಷಿ ಸಾವನ್ನಪ್ಪಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com