ಲಖನೌ: ಉತ್ತರಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ಯುವಕನೋರ್ವವನ್ನು ಮರ್ಮಾಂಗವನ್ನು ಕತ್ತರಿಸುವ ಭಯಾನಕ ಘಟನೆ ನಡೆದಿದೆ.
ಸಮೀರ್ ಹಲ್ಲೆಗೊಳಗಾದ ಯುವಕನಾಗಿದ್ದು ಇತನ ಮದುವೆಗೆ ಕೇವಲ ಮೂರು ದಿನ ಇರುವಾಗಲೇ ಈ ಘಟನೆ ನಡೆದಿದೆ. ಇನ್ನು ಸಮೀರ್ ಮೇಲೆ ಹಲ್ಲೆ ಮಾಡಿದರು ಸ್ವತಃ ಆತನ ಗೆಳೆಯರೆ. ಹೌದು ಸಮೀರ್, ಫರ್ವೇಜ್ ಎಂಬಾತನಿಂದ 1 ಲಕ್ಷ ರುಪಾಯಿಯನ್ನು ಸಾಲವಾಗಿ ಪಡೆದಿದ್ದನು.
ಹಣ ಹಿಂದಿರುಗಿಸುವಂತೆ ಫರ್ವೇಜ್ ಹಲವು ಬಾರಿ ಸಮೀರ್ ನನ್ನು ಕೇಳಿದ್ದಾನೆ. ಈ ಸಂಬಂಧ ಇಬ್ಬರಿಗೂ ಹಲವು ಬಾರಿ ಜಗಳ ಸಹ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಫರ್ವೇಜ್ ತನ್ನ ಇಬ್ಬರು ಸ್ನೇಹಿತರಿಗೆ ಸಮೀರ್ ನನ್ನು ಉಪಾಯವಾಗಿ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆ ತರುವಂತೆ ಹೇಳಿದ್ದಾನೆ.
ಅಲ್ಲಿಗೆ ಬಂದ ಸಮೀರ್ ನ ಮರ್ಮಾಂಗವನ್ನು ಮೂವರು ಸೇರಿ ಕತ್ತರಿಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ದಾರಿಹೋಕರು ಸಮೀರನ್ನು ಕಂಡು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement