ಶೌರ್ಯ ಪ್ರಶಸ್ತಿ ವಿಜೇತ ಬಲ್ವಿಂದರ್ ಸಿಂಗ್ ಹತ್ಯೆ ಆರೋಪಿ ಖಲಿಸ್ತಾನಿ ನಾಯಕ ದುಬೈನಲ್ಲಿ ಅರೆಸ್ಟ್

ದೆಹಲಿ ಪೊಲೀಸರ ವಿಶೇಷ ಕೋಶ ದುಬೈನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಐಎಸ್ಐ ನಂಟು ಹೊಂದಿದ್ದ ಖಲಿಸ್ತಾನ ಲೀಡರ್​ ಸುಖ್​ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖರಿವಾಲ್ ಎಂಬಾತನನ್ನ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 
ಶೌರ್ಯ ಪ್ರಶಸ್ತಿ ವಿಜೇತ  ಬಲ್ವಿಂದರ್ ಸಿಂಗ್
ಶೌರ್ಯ ಪ್ರಶಸ್ತಿ ವಿಜೇತ  ಬಲ್ವಿಂದರ್ ಸಿಂಗ್

ನವದೆಹಲಿ: ದೆಹಲಿ ಪೊಲೀಸರ ವಿಶೇಷ ಕೋಶ ದುಬೈನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮತ್ತು ಐಎಸ್ಐ ನಂಟು ಹೊಂದಿದ್ದ ಖಲಿಸ್ತಾನ ಲೀಡರ್​ ಸುಖ್​ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಬಿಖರಿವಾಲ್ ಎಂಬಾತನನ್ನ ಬಂಧಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಬ್ಬರು ಪಂಜಾಬ್ ಮೂಲದ ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು ಇವರು ಶೌರ್ಯ ಪ್ರಶಸ್ತಿ ವಿಜೇತ  ಬಲ್ವಿಂದರ್ ಸಿಂಗ್ ಸಂಧು ಹತ್ಯೆಯಲ್ಲಿ ಭಾಗಿಯಾಗಿದ್ದರೆಂದು ಮಾಹಿತಿ ಇದೆ. ಇದಲ್ಲದೆ ಕಾಶ್ಮೀರ ಮೂಲದ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರನ್ನೂ ಪೋಲೀಸರು ಬಂಧಿಸಿದ್ದಾರೆ. ಇವರು ದೆಹಲಿಯಲ್ಲಿ ಬಲಪಂಥೀಯ ನಾಯಕನ ಹತ್ಯೆಗಾಗಿ ಅಂತಿಮ ಹಂತದ ಯೋಜನೆಯಲ್ಲಿ ತೊಡಗಿದ್ದರೆನ್ನಲಾಗಿದೆ.

ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಸಹಕಾರವನ್ನು ತೋರಿಸುವ ಈ ಕಾರ್ಯಾಚರಣೆಯು ಪಂಜಾಬ್ ಮತ್ತು ದೇಶದ ಇತರ ಭಾಗಗಳಲ್ಲಿ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಖಲಿಸ್ತಾನ್ ಮತ್ತು ಕಾಶ್ಮೀರ ಜಾಲಗಳನ್ನು ಬಳಸಲು ಪ್ರಯತ್ನಿಸುವ ಪಾಕ್ ಪತ್ತೇದಾರಿ ಏಜೆನ್ಸಿಯ ಹೊಸ ಯೋಜನೆಯನ್ನು ಬಹಿರಂಗಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com