30 ದಿನಗಳೊಳಗೆ ಮಕ್ಕಳ ಆರೈಕೆ ಕೇಂದ್ರಗಳ ಎಲ್ಲಾ ಅಗತ್ಯಗಳನ್ನು ಪೂರೈಸಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ಮಕ್ಕಳ ಆರೈಕೆ ಕೇಂದ್ರಗಳಿಗೆ (ಸಿಸಿಐ) ಅಗತ್ಯ ಮೂಲಸೌಕರ್ಯಗಳು, ಸ್ಟೇಷನರಿ ವಸ್ತುಗಳು, ಪುಸ್ತಕಗಳು ಮತ್ತು ಇತರ ಉಪಕರಣಗಳನ್ನು ಮುಂದಿನ 30 ದಿನಗಳ ಒಳಗೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮಕ್ಕಳ ಆರೈಕೆ ಕೇಂದ್ರಗಳಿಗೆ (ಸಿಸಿಐ) ಅಗತ್ಯ ಮೂಲಸೌಕರ್ಯಗಳು, ಸ್ಟೇಷನರಿ ವಸ್ತುಗಳು, ಪುಸ್ತಕಗಳು ಮತ್ತು ಇತರ ಉಪಕರಣಗಳನ್ನು ಮುಂದಿನ 30 ದಿನಗಳ ಒಳಗೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುತ್ತದೆ. ಈ ಮೂಲಕ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಸುಪ್ರೀಂ ಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಅಜಯ್ ರಾಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠ ಮಿಕಸ್ ಕ್ಯೂರಿ ಅಡ್ವೊಕೇಟ್ ಗೌರವ್ ಅಗರ್ವಾಲ್ ಅವರ ಸಲಹೆಗಳನ್ನು ಸ್ವೀಕರಿಸಿದ ನಂತರ "ಇನ್ ರಿ ಕಾಂಟ್ಯಾಜಿಯನ್ ಆಫ್ ಕೋವಿಡ್19 ವೈರಸ್ ಇನ್ ಚಿಲ್ಡ್ರನ್ ಪ್ರೊಟೆಕ್ಷನ್ ಹೋಮ್ಸ್" ಎಂಬ ಸುಯೊ ಮೋಟೋ ಪ್ರಕರಣಕ್ಕೆ ಸಂಬಂಧಿಸಿ ಈ ನಿರ್ದೇಶನಗಳನ್ನು ನೀಡಿತು.

ಇಂದಿನಿಂದ 30 ದಿನಗಳ ಅವಧಿಯಲ್ಲಿ ಜಿಲ್ಲಾ ಮಕ್ಕಳ ಆರೈಕೆ ಕೇಂದ್ರಗಳು (ಡಿಸಿಪಿಯು) ನೀಡಿದ ಶಿಫಾರಸುಗಳ ಆಧಾರದ ಮೇಲೆ ಆನ್‌ಲೈನ್ ತರಗತಿಗಳಿಗೆ ಅಗತ್ಯವಾದ ಮೂಲಸೌಕರ್ಯ, ಪುಸ್ತಕಗಳು, ಲೇಖನ ಸಾಮಗ್ರಿಗಳು,ಮತ್ತು ಇತರ ಉಪಕರಣಗಳನ್ನು ಒದಗಿಸಿ ಎಂದು ಹೇಳಿದೆ.

ಇದಲ್ಲದೆ ವಿವಿಧ ಸಿಸಿಐಗಳಲ್ಲಿ ಮಕ್ಕಳಿಗೆ ಕಲಿಸಲು ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಕ ಮಾಡಿರುವ ಬಗ್ಗೆ ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು. ಮುಂದಿನ ವರ್ಷ ನಡೆಯಲಿರುವ ಅಂತಿಮ ಪರೀಕ್ಷೆಗಳಿಗೆ ತಯಾರಿ ನಡೆಸಲು ಮಕ್ಕಳಿಗೆ ಸಹಾಯ ಆಗುವಂತೆ ಚ್ಚುವರಿ ತರಗತಿಗಳನ್ನು ಸಹ ತೆಗೆದುಕೊಳ್ಳಬೇಕು. ಸಿಸಿಐಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯಗಳ ಪ್ರಗತಿ ಮತ್ತು ಆನ್‌ಲೈನ್ ತರಗತಿಗಳ ಪರಾಮರ್ಶೆಯನ್ನು ನಿಯತಕಾಲಿಕವಾಗಿ ತಿಂಗಳಿಗೊಮ್ಮೆ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಅಧಿಕಾರಿಗಳಿಗೆ ತಿಳಿಸುತ್ತದೆ. ಇತರ ಶಾಸನಬದ್ಧ ಸಂಸ್ಥೆಗಳ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ಪೋಷಕರು / ಪಾಲಕರು /ಸಾಕುಗೃಹಗಳಿಗೆ ಪುನಃಸ್ಥಾಪಿಸಲಾದ ಮಕ್ಕಳ ಮೌಲ್ಯಮಾಪನ ಮಾಡಲು ಡಿಸಿಪಿಯುಗಳಿಗೆ ನಿರ್ದೇಶಿಸಲಾಗಿದೆ.

ಮಕ್ಕಳ ಪೋಷಕರು / ಪೋಷಕರ ಆರ್ಥಿಕ ಸ್ಥಿತಿಯ ಬಗ್ಗೆ ವಿಚಾರಿಸಲು ಡಿಸಿಪಿಯುಗಳಿಗೆ ನಿರ್ದೇಶಿಸಲಾಗಿದೆ ಮತ್ತು ಪೋಷಕರು / ಪೋಷಕರ ಆರ್ಥಿಕ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ ಎಂದು ಕಂಡುಬಂದಲ್ಲಿ, ಅದನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ನೆರವು ನೀಡಲು ರಾಜ್ಯಕ್ಕೆ ಶಿಫಾರಸು ಮಾಡಬೇಕು, ಆ ಮೂಲಕ ಮಕ್ಕಳು ಶಾಲೆಗಳಿಗೆ ತೆರಳುವಂತಾಗಬೇಕು. ಡಿಸಿಪಿಯುಗಳು ನೀಡಿದ ಇಂತಹ ಶಿಫಾರಸಿನ ಮೇರೆಗೆ, ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಂಗಳಿಗೆ 2000 ರೂ.ಗಳನ್ನು ತೊಂದರೆಯಲ್ಲಿರುವ ಮಕ್ಕಳಪೋಷಕರಿಗೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ, ಇದನ್ನು ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕಿದೆ. ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಲಾಕ್ ಡೌನ್ ಸಮಯದಲ್ಲಿ ಕುಟುಂಬಗಳಲ್ಲಿ ಮನೆಗೆ ಮರಳಿದ ಮಕ್ಕಳ ಸಂಖ್ಯೆಯನ್ನು ಕಂಡುಹಿಡಿಯಲು ಮತ್ತು 25 ಮಕ್ಕಳ ಗುಂಪಿಗೆ ಮಾರ್ಗದರ್ಶಿ / ಶಿಕ್ಷಕರನ್ನು ಆಯೋಜಿಸಲು ಡಿಸಿಪಸ್ ಗೆ ನಿರ್ದೇಶಿಸಲಾಗಿದೆ.

ನಿರ್ದೇಶನಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣಗಳು ಅಗತ್ಯವೆಂದು ಭಾವಿಸಿದರೆ ಅಮಿಕಸ್ ಕ್ಯೂರಿ ಅವರನ್ನು ಸಂಪರ್ಕಿಸಲು ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com