ಭಾರತದ ಪುನರುತ್ಥಾನಕ್ಕಾಗಿ ಸ್ವಾಮಿ ವಿವೇಕಾನಂದ ತಮ್ಮ ಜೀವನವನ್ನೇ ಮುಡುಪಾಗಿಟ್ಟರು: ಅಮಿತ್ ಶಾ

ಸ್ವಾಮಿ ವಿವೇಕಾನಂದ ಭಾರತ ಮಾತೆಯ ಅತಿ ಮಹಾನ್ ಪುತ್ರ, ದೇಶದ ಪುನರುತ್ಥಾನಕ್ಕೆ ತಮ್ಮ  ಜೀವನವನ್ನೆ ಮುಡುಪಾಗಿಟ್ಟಿವರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಕೊಲ್ಕೋತಾ: ಸ್ವಾಮಿ ವಿವೇಕಾನಂದ ಭಾರತ ಮಾತೆಯ ಅತಿ ಮಹಾನ್ ಪುತ್ರ, ದೇಶದ ಪುನರುತ್ಥಾನಕ್ಕೆ ತಮ್ಮ  ಜೀವನವನ್ನೆ ಮುಡುಪಾಗಿಟ್ಟಿವರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತಮ್ಮ ಎರಡು ದಿನಗಳ ಪ್ರವಾಸದ ವೇಳೆ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿದ್ದ ಅಮಿತ್ ಶಾ, ಸ್ವಾಮಿ ವಿವೇಕಾನಂದರಿಗೆ  ಗೌರವ ನಮನ ಸಲ್ಲಿಸಿದರು.

ರಾಮಕೃಷ್ಣ ಮಿಷನ್ ನಲ್ಲಿ ಸಮಯ ಕಳೆಯುವುದು ಹಾಗೂ ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದ ಅಮಿತ್ ಶಾ, ಸ್ವಾಮಿ ವಿವೇಕಾನಂದ ಭಾರತ ಮಾತೆಯ ಮಹಾನ್ ಪುತ್ರ ಎಂದು ಹೇಳಿದ್ದಾರೆ.

ಇದು ವಿವೇಕಾನಂದ ಅವರು ಜನಿಸಿದ ಸ್ಥಳ. ವಿವೇಕಾನಂದ  ಅವರು ಆಧುನಿಕತೆ ಮತ್ತು ಆಧ್ಯಾತ್ಮಿಕತೆಯಿಂದ ತೋರಿಸಿದ ಹಾದಿಯಲ್ಲಿ ನಾವು ನಡೆಯಬೇಕು ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ರಾಮಕೃಷ್ಣ ಮಿಷನ್ ಭೇಟಿಯ ನಂತರ ಅಮಿತ್ ಶಾ ಮದಿನಿಪುರದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com