ರೈತರ ಪ್ರತಿಭಟನೆ ಬಗ್ಗೆ ಕವಿತೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ

ರೈತರ ಪ್ರತಿಭಟನೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುವುದಕ್ಕೆ ಬಳಸಿಕೊಂಡಿರುವ ರಾಹುಲ್ ಗಾಂಧಿ ಕವಿತೆಯೊಂದನ್ನು ಟ್ವೀಟ್ ಮಾಡಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. 
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ನವದೆಹಲಿ: ರೈತರ ಪ್ರತಿಭಟನೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುವುದಕ್ಕೆ ಬಳಸಿಕೊಂಡಿರುವ ರಾಹುಲ್ ಗಾಂಧಿ ಕವಿತೆಯೊಂದನ್ನು ಟ್ವೀಟ್ ಮಾಡಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. 

ಪ್ರತಿಭಟನಾ ನಿರತ ರೈತರು ಈ ಸರ್ಕಾರಕ್ಕೆ ಬಗ್ಗದೇ, ಹೆದರದೇ ಮುಂದೆ ನಡೆಯಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ದ್ವಾರಕಾ ಪ್ರಸಾದ್ ಮಹೇಶ್ವರಿ ಅವರ ಪ್ರಸಿದ್ಧ ಪದ್ಯ/ ಕವಿತೆ ವೀರ್ ತುಮ್ ಬಡೆ ಚಲೋ ಎಂಬ ಕವಿತೆಯನ್ನು ಸ್ವಲ್ಪ ಬದಲಾವಣೆ ಮಾಡಿ ಬರೆದು ರೈತರನ್ನು ಬೆಂಬಲಿಸಿದ್ದಾರೆ.

ಮುಂದೆ ಸಾಗುತ್ತಿರಿ, ಓ ಧೀರರೇ, ತಾಳ್ಮೆಯಿಂದ ಮುಂದೆ ಸಾಗಿ, ನೀರಿನ ಫಿರಂಗಿ ಶವರ್ ಅಥವಾ ಬ್ಲಸ್ಟರ್ ಗಳಿಗೆ ಅಂಜದಿರಿ, ಓ ಧೀರರೇ... ದೃಢ ಹೆಜ್ಜೆ ಇಡಿ, ಓ ಅನ್ನದಾತರೇ, ಮುಂದೆ ನುಗ್ಗಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ರೈತರನ್ನು ಉತ್ತೇಜಿಸಿದ್ದಾರೆ.

ಸರ್ಕಾರ ಪ್ರತಿಭಟನಾ ನಿರತ ರೈತರ ಮಾತುಗಳನ್ನು ಕೇಳಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com