ಕೇವಲ ಸ್ಥಳ, ಸಮಯವನ್ನು ನಿಗದಿಪಡಿಸಿ: ಅರವಿಂದ ಕೇಜ್ರಿವಾಲ್ ಸವಾಲ್  ಸ್ವೀಕರಿಸಿದ ಅಮಿತ್ ಶಾ

ವಿವಿಧ ವಿಚಾರಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೊಂದಿಗೆ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಚರ್ಚೆ ನಡೆಯಲಿರುವ ಸ್ಥಳ ಹಾಗೂ ಸಮಯವನ್ನು ಅರವಿಂದ ಕೇಜ್ರಿವಾಲ್ ತಿಳಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಮಿತ್ ಶಾ, ಕೇಜ್ರಿವಾಲ್
ಅಮಿತ್ ಶಾ, ಕೇಜ್ರಿವಾಲ್

ನವದೆಹಲಿ: ವಿವಿಧ ವಿಚಾರಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರೊಂದಿಗೆ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಚರ್ಚೆ ನಡೆಯಲಿರುವ ಸ್ಥಳ ಹಾಗೂ ಸಮಯವನ್ನು ಅರವಿಂದ ಕೇಜ್ರಿವಾಲ್ ತಿಳಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮೋತಿ ನಗರದಲ್ಲಿ ರೋಡ್ ಶೋ ನಡೆಸಿದ ಅಮಿತ್ ಶಾ, ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಹೆಸರಿಸುವಂತೆ ಅರವಿಂದ್ ಕೇಜ್ರಿವಾಲ್ ನಮ್ಮನ್ನು ಕೇಳುತ್ತಾರೆ. ಈ ವಿಚಾರದಲ್ಲಿ ಚರ್ಚೆಗೆ ಸಿದ್ಧ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ಅಗತ್ಯತೆ ಇಲ್ಲ. ಕೇವಲ ಸಮಯ, ಸ್ಥಳವನ್ನು ನಿಗದಿಪಡಿಸಿದರೆ ಸಾಕು ಬಿಜೆಪಿಯವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಮುಖ್ಯಮಂತ್ರಿ ಕಳವಳದಂತೆ ನಮ್ಮ ಮುಖ್ಯಮಂತ್ರಿ ದೆಹಲಿ ಜನರು ಎಂದು ಅಮಿತ್ ಶಾ ನುಡಿದರು. ಇದಕ್ಕೂ ಮುಂಚೆ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ತಾಕತ್ತಿದ್ದರೆ ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಂದು ಬಿಜೆಪಿಗೆ ಸವಾಲ್ ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com