ನವದೆಹಲಿ: ಬಿಜೆಪಿ ಸಂಸದ ಪರ್ವೇಶ್ ವರ್ಮಾ, ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವುದು ತೀವ್ರ ಮಾನಸಿಕ ಕ್ಷೋಭೆಗೆ ಗುರಿಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ನೋವು ತೋಡಿಕೊಂಡಿದ್ದಾರೆ. ತಮ್ಮ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿಕೊಂಡಿದ್ದೇನೆ.
ಈ ಉದ್ದೇಶಕ್ಕಾಗಿ ಸರ್ಕಾರಿ ಉದ್ಯೋಗವನ್ನು ಸಹ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ. ಒಂದೊಮ್ಮೆ ತಾವು ದೆಹಲಿಯ ಜನರಿಗೆ ಭಯೋತ್ಪಾದಕನಂತೆ ಕಂಡು ಬಂದರೆ ಮತವನ್ನು ಬಿಜೆಪಿಗೆ ಚಲಾಯಿಸಲಿ, ಇಲ್ಲವಾದರೆ ನಮ್ಮ ಪಕ್ಷದ “ಪೊರಕೆ” ಗುರುತಿಗೆ ಮತ ನೀಡಲಿ ಎಂದು ಮನವಿ ಮಾಡಿದ್ದಾರೆ.
Advertisement