ನಾನು ಭಯೋತ್ಪಾದಕನಂತೆ ಕಂಡರೆ ದೆಹಲಿ ಜನತೆ ಬಿಜೆಪಿಗೆ ಮತ ನೀಡಲಿ: ಕೇಜ್ರಿವಾಲ್

ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವುದು ತೀವ್ರ ಮಾನಸಿಕ ಕ್ಷೋಭೆಗೆ ಗುರಿಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ನೋವು ತೋಡಿಕೊಂಡಿದ್ದಾರೆ.
ನಾನು ಭಯೋತ್ಪಾದಕನಂತೆ ಕಂಡರೆ ದೆಹಲಿ ಜನತೆ ಬಿಜೆಪಿಗೆ ಮತ ನೀಡಲಿ: ಕೇಜ್ರಿವಾಲ್
ನಾನು ಭಯೋತ್ಪಾದಕನಂತೆ ಕಂಡರೆ ದೆಹಲಿ ಜನತೆ ಬಿಜೆಪಿಗೆ ಮತ ನೀಡಲಿ: ಕೇಜ್ರಿವಾಲ್

ನವದೆಹಲಿ: ಬಿಜೆಪಿ ಸಂಸದ ಪರ್ವೇಶ್ ವರ್ಮಾ, ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವುದು ತೀವ್ರ ಮಾನಸಿಕ ಕ್ಷೋಭೆಗೆ ಗುರಿಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ನೋವು ತೋಡಿಕೊಂಡಿದ್ದಾರೆ. ತಮ್ಮ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿಕೊಂಡಿದ್ದೇನೆ. 

ಈ ಉದ್ದೇಶಕ್ಕಾಗಿ ಸರ್ಕಾರಿ ಉದ್ಯೋಗವನ್ನು ಸಹ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ.  ಒಂದೊಮ್ಮೆ ತಾವು  ದೆಹಲಿಯ ಜನರಿಗೆ ಭಯೋತ್ಪಾದಕನಂತೆ ಕಂಡು ಬಂದರೆ ಮತವನ್ನು ಬಿಜೆಪಿಗೆ ಚಲಾಯಿಸಲಿ,   ಇಲ್ಲವಾದರೆ ನಮ್ಮ ಪಕ್ಷದ  “ಪೊರಕೆ” ಗುರುತಿಗೆ ಮತ ನೀಡಲಿ ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com