'ಉಗ್ರರಿಗೆ ಬಿರಿಯಾನಿ' ಹೇಳಿಕೆ: ಯೋಗಿ ಆದಿತ್ಯನಾಥ್ ಗೆ ಶೋಕಾಸ್ ನೋಟಿಸ್ ನೀಡಿದ ಆಯೋಗ

ಉಗ್ರರಿಗೆ ಬಿರಿಯಾನಿ ಹೇಳಿಕೆ ಆರೋಪದ ಮೇರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ  ಚುನಾವಣಾ ಆಯೋಗ ಇಂದು ಶೋಕಾಸ್ ನೋಟಿಸ್ ನೀಡಿದೆ
ಯೋಗಿ ಆದಿತ್ಯ ನಾಥ್
ಯೋಗಿ ಆದಿತ್ಯ ನಾಥ್

ನವದೆಹಲಿ: ಉಗ್ರರಿಗೆ ಬಿರಿಯಾನಿ ಹೇಳಿಕೆ ಆರೋಪದ ಮೇರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ  ಚುನಾವಣಾ ಆಯೋಗ ಇಂದು ಶೋಕಾಸ್ ನೋಟಿಸ್ ನೀಡಿದೆ

ಶುಕ್ರವಾರ ಸಂಜೆ 5 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗ ಯೋಗಿ ಆದಿತ್ಯ ನಾಥ್ ಅವರಿಗೆ ಸೂಚಿಸಲಾಗಿದೆ.

ಯೋಗಿ ಆದಿತ್ಯ ನಾಥ್ ಇಂತಹ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ದೆಹಲಿ ವಿಧಾನಸಭಾ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಫೆಬ್ರವರಿ 1 ರಂದು ಚುನಾವಣಾ ಪ್ರಚಾರದಲ್ಲಿ ಯೋಗಿ ಆದಿತ್ಯ ನಾಥ್ ಈ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com