ನವದೆಹಲಿ: ಬಿಜೆಪಿ ಭಗವಾನ್ ರಾಮನ ಹೆಸರಿನಲ್ಲಿ ಮತಯಾಚಿಸುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ವಕ್ತಾರ ಗೌರವ್ ಗೊಗೊಯಿ, ಅಯೋಧ್ಯಾ ದೇಗುಲ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸುಪ್ರೀಂಕೋರ್ಟ್. ಅದನ್ನು ಆಧಾರವಾಗಿರಿಸಿಕೊಂಡು ಬಿಜೆಪಿ ದೇವರ ಹೆಸರಿನಲ್ಲಿ ಮತಯಾಚಿಸುತ್ತಿದೆ ಎಂದು ಆರೋಪಿಸಿದರು.'
ಸುಪ್ರೀಂಕೋರ್ಟ್ ಆದೇಶದಂತೆ ಅಯೋಧ್ಯಾ ದೇಗುಲ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಅಯೋಧ್ಯಾ ಭೂವಿವಾದದ ಆಧಾರದ ಮತಬ್ಯಾಂಕ್ ರಾಜಕಾರಣ ನಡೆಸುತ್ತಿದೆ. ಆದ್ದರಿಂದ ಈಗಲೂ ಅದನ್ನೇ ದಾಳವಾಗಿ ಬೆಳೆಸಿಕೊಳ್ಳುವುದು ನಿರೀಕ್ಷಿತವೇ ಎಂದರು.
Advertisement