ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ರಾಜ್ ಠಾಕ್ರೆ ಮೆಗಾ ಸಮಾವೇಶ 

ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎಮ್ಎನ್ಎಸ್ ನಾಯಕ ರಾಜ್ ಠಾಕ್ರೆ ಮೆಗಾ ಸಮಾವೇಶ ನಡೆಸಿದ್ದಾರೆ. 
ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ರಾಜ್ ಠಾಕ್ರೆ ಮೆಗಾ ಸಮಾವೇಶ
ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ರಾಜ್ ಠಾಕ್ರೆ ಮೆಗಾ ಸಮಾವೇಶ

ಮುಂಬೈ: ಪಾಕ್-ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಎಮ್ಎನ್ಎಸ್ ನಾಯಕ ರಾಜ್ ಠಾಕ್ರೆ ಮೆಗಾ ಸಮಾವೇಶ ನಡೆಸಿದ್ದಾರೆ. 

ಸುಮಾರು 100,000 ಕ್ಕೂ ಹೆಚ್ಚು ಕಾರ್ಯಕರ್ತರು ಮೆಗಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನ- ಬಾಂಗ್ಲಾದೇಶ ವಲಸಿಗರನ್ನು ಹೊರಹಾಕಬೇಕೆಂದು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಆಗ್ರಹಿಸಲಾಯಿತು. 

ಶಿವಾಜಿ ಪಾರ್ಕ್ ನಿಂದ ಸಿದ್ಧಿವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರಾಜ್ ಠಾಕ್ರೆ, ಪತ್ನಿ ಶರ್ಮಿಳಾ ಪುತ್ರ ಎಂಎನ್ಎಸ್ ನಾಯಕ ಅಮಿತ್ ಠಾಕ್ರೆ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. 

ಸುಮಾರು 4 ಕಿ.ಮೀ ಸಾಗಿದ ನಂತರ ಆಜಾದ್ ಮೈದಾನದಲ್ಲಿ ಮೆರವಣಿಗೆ ಅಂತ್ಯಗೊಂಡಿದ್ದು, ರಾಜ್ ಠಾಕ್ರೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಾರ್ವಜನಿಕ ಮೆಗಾ ಪ್ರತಿಭಟನಾ ಮೆರವಣಿಗೆ ಸಿಎಎ-ಎನ್ ಆರ್ ಸಿ-ಎನ್ ಪಿಆರ್ ನ್ನು ಬೆಂಬಲಿಸುವುದಕ್ಕೆ ಅಲ್ಲ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com