ಲಾರಿ-ಬಸ್ಸು ಡಿಕ್ಕಿ, 10ಮಂದಿಗೆ ಗಾಯ

ಲಾರಿ ಮತ್ತು ಸಾರಿಗೆ ಬಸ್ಸಿನ ನಡುವೆ ಸಂಭವಿಸಿದ ಅಪಘಾತದ ಪರಿಣಾಮ 10ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ಮದ್ದರಕಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಲಾರಿ-ಬಸ್ಸು ಡಿಕ್ಕಿ, 10ಮಂದಿಗೆ ಗಾಯ
ಲಾರಿ-ಬಸ್ಸು ಡಿಕ್ಕಿ, 10ಮಂದಿಗೆ ಗಾಯ

ಯಾದಗಿರಿ: ಲಾರಿ ಮತ್ತು ಸಾರಿಗೆ ಬಸ್ಸಿನ ನಡುವೆ ಸಂಭವಿಸಿದ ಅಪಘಾತದ ಪರಿಣಾಮ 10ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶಹಾಪುರ ತಾಲೂಕಿನ ಮದ್ದರಕಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ  ಒಂದು ಮಗು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ‌.

ಅಪಘಾತದಲ್ಲಿ ಬಸ್ಸು ಚಾಲಕ ಪ್ರಭು ಬಸಲಿಂಗಪ್ಪ‌, ಪ್ರಯಾಣಿಕರಾದ  ಸುನೀತಾ,ವೈಷ್ಣವಿ, ಸುನೀತಾ ಎಂ, ಮಾನಪ್ಪ, ಬಲಭೀಮ,ಅಯ್ಯಪ್ಪ,ಮಲ್ಲಿಕಾರ್ಜುನ, ಲಕ್ಷ್ಮೀ, ಸತೀಶ್ ಮಹ್ಮದ್ ಶಬೀರ, ಸಿದ್ದಕಿ ಎಂಬುವವರು  ಗಾಯಗೊಂಡಿದ್ದಾರೆ ಎನ್ನಲಾಗಿದೆ‌.
ಸಾರಿಗೆ ಬಸ್ಸು ಶಹಾಪುರದಿಂದ ಕಲಬುರಗಿ ಕಡೆಗೆ ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com