ಚೆನ್ನೈ: ಸಿಎಎ, ಎನ್ ಆರ್ ಸಿ, ಎನ್ ಪಿಆರ್ ವಿರುದ್ಧ ತಮಿಳುನಾಡಿನಲ್ಲಿ ಮುಸ್ಲಿಂ ಸಂಘಟನೆಗಳು, ಮಹಿಳೆಯರು ಪ್ರತಿಭಟನಾ ಮೆರವಣಿಗೆಯನ್ನು ಫೆ.19 ರಂದು ನಡೆಸಿದರು.
ತಮಿಳುನಾಡು ಸಚಿವಾಲಯದ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಕೊಂಡೊಯ್ದ ಪ್ರತಿಭಟನಾ ನಿರತರು ಸಿಎಎ, ಎನ್ಆರ್ ಸಿ, ಎನ್ ಪಿಆರ್ ವಿರುದ್ಧವಾಗಿ ತಮಿಳುನಾಡು ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಬೇಕೆಂದು ಆಗ್ರಹಿಸಿದ್ದಾರೆ.
ಆಕ್ರೋಶಭರಿತರಾಗಿದ್ದ ಪ್ರತಿಭಟನಾ ನಿರತರು ತಮಿಳುನಾಡು ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಇದೇ ವೇಳೆ ಯತ್ನಿಸಿದರಾದರೂ... ಪೊಲೀಸರು ತಡೆದರು.
ಸಿಎಎ, ಎನ್ ಆರ್ ಸಿ, ಎನ್ ಪಿಆರ್ ನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು, ಮಹಿಳೆಯರು ಫೆ.14 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement