ರಾಯಚೂರು: ಆಂಧ್ರಪ್ರದೇಶದ ಭಾಗವಾಗಿರುವ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಟಿಡಿಪಿ ಮಾಜಿ ಶಾಸಕ ತಿಕ್ಕಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಮಾಡಲು ಹೊರಟಿದ್ದಾರೆ. ಇದಕ್ಕೆ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ಜನರ ವಿರೋಧವಿದೆ. ಒಂದು ರಾಜಧಾನಿಗೆ ಗತಿಯಿಲ್ಲ. ಈಗಿರುವಾಗ ಮೂರು ರಾಜಧಾನಿ ಮಾಡುವ ಅವಶ್ಯಕತೆ ಏನಿದೆ? ಎಂದು ತಿಕ್ಕಾರೆಡ್ಡಿ ಪ್ರಶ್ನಿಸಿದರು.
ವಿಶಾಖಪಟ್ಟಣಂ ಅನ್ನು ರಾಜಧಾನಿ ಮಾಡುವುದಾದರೆ, ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಒತ್ತಾಯಿಸಿದ್ದಾರೆ. ನಮಗೆ ವಿಶಾಖಪಟ್ಟಣಂಗಿಂತ ಬೆಂಗಳೂರೇ ಹತ್ತಿರ. ಅಲ್ಲದೇ ರಾಯಚೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರರು ಸಹ ನೆಲೆಸಿದ್ದಾರೆ ಎಂದರು.
Advertisement