ನವದೆಹಲಿ: ಪಾಕಿಸ್ತಾನದಲ್ಲಿ ನಾಂಕನ್ ಸಾಹೀಬ್ ಗುರುದ್ವಾರದ ಮೇಲೆ ದಾಳಿಯನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
ನಾಂಕನ್ ಸಾಹೀಬ್ ಮೇಲಿನ ದಾಳಿ ಅತ್ಯಂತ ಖಂಡನೀಯ ಮತ್ತು ನಿಸಂಶಯವಾಗಿ ಖಂಡಿಸಲೇಬೇಕಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಧರ್ಮಾಂಧತೆಯು ಅಪಾಯಕಾರಿ, ಅತ್ಯಂತ ಹಳೆಯ ವಿಷಕ್ಕೆ ಯಾವುದೇ ಗಡಿ ಇರುವುದಿಲ್ಲ. ಪ್ರೀತಿ, ಪರಸ್ಪರ ಗೌರವ, ತಿಳುವಳಿಕೆ ಅದರ ಏಕೈಕ ಪ್ರತಿಮದ್ದು ಆಗಿದೆ ಎಂದು ಅವರು ಹೇಳಿದ್ದಾರೆ.
Advertisement