ನವದೆಹಲಿ:ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ಕಾನೂನಿನ ನೈಜ ಅಂಶಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಲುಪಿಸುವ ಬೃಹತ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿ, ಖ್ಯಾತನಾಮರು, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕøತಿ ವಲಯದ ಹೆಸರಾಂತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ವಹಿಸಲಿದ್ದು, ಇವರಿಗೆ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಪಕ್ಷದ ಇತರ ನಾಯಕರು ಜೊತೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಕ್ರೀಡೆ ಮತ್ತು ಸಂಸ್ಕøತಿ ವಲಯದವರೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ, ಸಿಎಎ ನ ನಿಜವಾದ ಉದ್ದೇಶವನ್ನು ತಿಳಿಸಲಾಗುವುದು. ಈ ಕಾನೂನು ಭಾರತದ ಯಾವುದೇ ಪ್ರಜೆಗಳ ವಿರುದ್ಧವಾಗಿಲ್ಲ ಎಂಬುದನ್ನು ಮನದಟ್ಟು ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.
Advertisement