ಸಿಎಎ ಅಭಿಯಾನ: ವಿವಿಧ ಕ್ಷೇತ್ರಗಳ ಖ್ಯಾತನಾಮರನ್ನು ತಲುಪಲು ಬಿಜೆಪಿ ಕಾರ್ಯಕ್ರಮ

ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ಕಾನೂನಿನ ನೈಜ ಅಂಶಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಲುಪಿಸುವ ಬೃಹತ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿ, ಖ್ಯಾತನಾಮರು, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕøತಿ ವಲಯದ ಹೆಸರಾಂತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸಿಎಎ ಅಭಿಯಾನ: ವಿವಿಧ ಕ್ಷೇತ್ರಗಳ ಖ್ಯಾತನಾಮರನ್ನು ತಲುಪಲು ಬಿಜೆಪಿ ಕಾರ್ಯಕ್ರಮ

ನವದೆಹಲಿ:ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ಕಾನೂನಿನ ನೈಜ ಅಂಶಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಲುಪಿಸುವ ಬೃಹತ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿ, ಖ್ಯಾತನಾಮರು, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕøತಿ ವಲಯದ ಹೆಸರಾಂತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಈ ಕಾರ್ಯಕ್ರಮದ ನೇತೃತ್ವವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ವಹಿಸಲಿದ್ದು, ಇವರಿಗೆ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಪಕ್ಷದ ಇತರ ನಾಯಕರು ಜೊತೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


‘ಕ್ರೀಡೆ ಮತ್ತು ಸಂಸ್ಕøತಿ ವಲಯದವರೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ, ಸಿಎಎ ನ ನಿಜವಾದ ಉದ್ದೇಶವನ್ನು ತಿಳಿಸಲಾಗುವುದು. ಈ ಕಾನೂನು ಭಾರತದ ಯಾವುದೇ ಪ್ರಜೆಗಳ ವಿರುದ್ಧವಾಗಿಲ್ಲ ಎಂಬುದನ್ನು ಮನದಟ್ಟು ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com