ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು: ಗುಪ್ತಚರ ಇಲಾಖೆ ಮಾಹಿತಿ

ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಸ್ಫೋಟ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಸೇನಾ ಯೋಧರಿಗೆ ವಿಷ ಹಾಕಲು ಉಗ್ರರು ಭಾರೀ ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಸ್ಫೋಟ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. 

ಯೋಧರು ಸೇವನೆ ಮಾಡುವ ಆಹಾರ ಹಾಗೂ ಕುಡಿಯುವ ನೀರಿನಲ್ಲಿ ವಿಷ ಹಾಕಲು ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. 

ಕೆಳದವಾದ ಭಾರತೀಯ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಮನೋಜ್ ಮುಕುಂದ್ ನರವಾಣೆಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಸುಳುವಿಕೆ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದ್ದು, ಇಂತಹ ಯತ್ನಗಳು ವಿಫಲಗೊಳ್ಳುವಂತೆ ಭಾರತೀಯೇ ಸೇನೆ ಮಾಡುತ್ತಿದೆ ಎಂದು ಹೇಳಿದ್ದರು. 

ಪಾಕಿಸ್ತಾನ ಗಡಿ ನಿಯಂತ್ರಣ ಪ್ರದೇಶದಲ್ಲಿ ಉಗ್ರರ ಶಿಬಿರಗಳು ಮುಂದುವರೆಸಿದ್ದು, ಭಾರತ ಗಡಿಗಳಲ್ಲಿ ಭದ್ರತೆ ಹೆಚ್ಚಿಸಿ, ಕಣ್ಗಾವಲಿರಿಸಲಾಗಿದೆ. ಭಯೋತ್ಪಾದನೆ ಸಮಸ್ಯೆ ಹೊಸದಲ್ಲ. ಹಲವು ವರ್ಷಗಳಿಂದಲೂ ಇದೆ. ಉಗ್ರ ವಾದಕ್ಕೆ ದಿಟ್ಟ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com