ಕಾಶ್ಮೀರದಲ್ಲಿ ಎನ್‌ಕೌಂಟರ್‌: ಹಿಜ್ಬುಲ್ ಉಗ್ರನ ಸದೆಬಡಿದು ಗಡಿಯಲ್ಲಿ ಯೋಧರ ಸಂಕ್ರಾತಿ!

ದೇಶದಾದ್ಯಂತ ಇಂದು ಮಕರ ಸಂಕ್ರಮಣ ಸಡಗರ, ಇದರ ನಡುವೆ ನಮ್ಮ ಯೋಧರು ಸಹ ಗಡಿಯಲ್ಲಿ ನುಸುಳುವ ಉಗ್ರರನ್ನು ಎನ್‌ಕೌಂಟರ್‌ ಮಾಡುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಇದೇ ವೇಳೆ ಆತನ ಸಹಚರನೊಬ್ಬ ತಪ್ಪಿಸಿಕೊಂಡಿದ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ದೇಶದಾದ್ಯಂತ ಇಂದು ಮಕರ ಸಂಕ್ರಮಣ ಸಡಗರ, ಇದರ ನಡುವೆ ನಮ್ಮ ಯೋಧರು ಸಹ ಗಡಿಯಲ್ಲಿ ನುಸುಳುವ ಉಗ್ರರನ್ನು ಎನ್‌ಕೌಂಟರ್‌ ಮಾಡುವ ಮೂಲಕ ಹಬ್ಬವನ್ನು ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಇದೇ ವೇಳೆ ಆತನ ಸಹಚರನೊಬ್ಬ ತಪ್ಪಿಸಿಕೊಂಡಿದ್ದಾನೆಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಗೊಂಡಾನಾ ಬೆಲ್ಟ್ ನಲ್ಲಿ ಉಗ್ರರು, ಸೇನಾ ಸಿಬ್ಬಂದಿ ಹಾಗೂ ಪೋಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ  ಇದೆ ಎಂದು  ಜಮ್ಮುವಿನ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

ಗುಂಡಿನ ಕಾಳಗದಲ್ಲಿ , ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದ  ಎ ++ ವರ್ಗದ ಭಯೋತ್ಪಾದಕ ಹರೂನ್ ವಾನಿಯನ್ನು ಕೊಲ್ಲಲಾಯಿತು. ಆತನು ಜಿಲ್ಲೆಯ ಗಟ್ಟಾ ಬೆಲ್ಟ್ ಗೆ ಸೇರಿದವನಾಗಿದ್ದು ಮತ್ತೊಬ್ಬ ಭಯೋತ್ಪಾದಕನು ಹಿಮದಿಂದ ಆವೃತವಾದ ಪ್ರದೇಶಗಳತ್ತ ಓಡಿಹೋದನು ಮತ್ತು ಅವನನ್ನು ಪತ್ತೆಹಚ್ಚಲು ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಎಕೆ -47 ರೈಫಲ್, ಮೂರು ನಿಯತಕಾಲಿಕೆಗಳು, 73 ರೌಂಡ್ ಗಳು,  ಚೀನಾದ ಗ್ರೆನೇಡ್ ಮತ್ತು ರೇಡಿಯೋ ಸೆಟ್ ಅನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ದೋಡಾ-ಕಿಶ್ತ್ವಾರ್-ರಾಂಬನ್ ಶ್ರೇಣಿ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಜಿತ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com