ನವದೆಹಲಿ: ಇತ್ತೀಚೆಗೆ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಭಾರತ, ಪಾಕಿಸ್ತಾನಕ್ಕೆ ಸಮನ್ಸ್ ಜಾರಿ ಮಾಡಿದೆ.
ಜನವರಿ 14 ರಂದು ಶಾಂತಿ ಮತ್ತು ಸರ್ಮಿ ಮೇಘವಾಲ್ ಎಂಬ ಇಬ್ಬರು ಅಪ್ರಾಪ್ತ ಹಿಂದು ಬಾಲಕಿಯರು ಹಾಗೂ ಜನವರಿ 15ರಂದು ಮೆಹಕ್ ಎಂಬ ಬಾಲಕಿಯರನ್ನು ಅಪಹರಣ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಯಭಾರಿಗೆ ಭಾರತ ಸಮನ್ಸ್ ಜಾರಿ ಮಾಡಿದೆ.
ಸಮನ್ಸ್ ನಲ್ಲಿ ಪ್ರಕರಣ ಸಂಬಂಧ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಬಾಲಕಿಯರನ್ನು ತಮ್ಮ ಕುಟುಂಬಗಳಿಗೆ 'ತಕ್ಷಣ ಸುರಕ್ಷಿತವಾಗಿ ಹಿಂದಿರುಗಿಸಬೇಕು' ಎಂದು ತಾಕೀತು ಮಾಡಿದೆ.
Advertisement