ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು

ಪಂಜಾಬ್‍ ನ ಸಿರ್ಹಿಂದ್ ಸಮೀಪ ಶನಿವಾರ ರಾತ್ರಿ ಜಮ್ಮು-ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು

ಫತೇಘರ್‍ ಸಾಹಿಬ್: ಪಂಜಾಬ್‍ ನ ಸಿರ್ಹಿಂದ್ ಸಮೀಪ ಶನಿವಾರ ರಾತ್ರಿ ಜಮ್ಮು-ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಲಭ್ಯವಾದ ಮಾಹಿತಿಯಂತೆ ಕೊಂಡಿ ಮುರಿದಿದ್ದರಿಂದ ಎಂಜಿನ್‍, ಬೋಗಿಗಳಿಂದ ತಕ್ಷಣವೇ ಬೇರ್ಪಟ್ಟಿದೆ. ರೈಲು ಲೂಧಿಯಾನದಿಂದ ಜೈಪುರಕ್ಕೆ ಸಂಚರಿಸುತ್ತಿತ್ತು. ರಾತ್ರಿ 11.15 ರ ಸುಮಾರಿಗೆ ಲೂಧಿಯಾನದಿಂದ ರೈಲು ಹೊರಟಿದೆ. ಮುಂದಿನ ನಿಲ್ದಾಣ ಅಂಬಾಲವನ್ನು ರೈಲು ತಲುಪಬೇಕಿತ್ತು. ಆದರೆ ಮಧ್ಯರಾತ್ರಿ 12 ರ ಸುಮಾರಿಗೆ ಸಿರ್ಹಿಂದ್ ಬಳಿ ಎಂಜಿನ್ ಬೇರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಮೊದಲ ಬೋಗಿಯ ಬಾಗಿಲಲ್ಲಿ ನಿಂತಿದ್ದ ಯುವಕನೊಬ್ಬ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com