ಗಲ್ಲು ಶಿಕ್ಷೆಯಾಗುವುದಿಲ್ಲವೆಂದು ಅಪರಾಧಿಗಳ ಪರ ವಕೀಲರಿಂದ ಚಾಲೆಂಜ್: ನಿರ್ಭಯಾ ತಾಯಿ ಅಳಲು

ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ತಡೆಯಾಜ್ಞೆ ದೊರೆತಿರುವ ಬೆಳವಣಿಗೆಯ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಗಲ್ಲು ಶಿಕ್ಷೆಯಾಗುವುದಿಲ್ಲವೆಂದು ಅಪರಾಧಿಗಳ ಪರ ವಕೀಲರಿಂದ ಚಾಲೆಂಜ್: ನಿರ್ಭಯಾ ತಾಯಿ ಅಳಲು
ಗಲ್ಲು ಶಿಕ್ಷೆಯಾಗುವುದಿಲ್ಲವೆಂದು ಅಪರಾಧಿಗಳ ಪರ ವಕೀಲರಿಂದ ಚಾಲೆಂಜ್: ನಿರ್ಭಯಾ ತಾಯಿ ಅಳಲು

ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ತಡೆಯಾಜ್ಞೆ ದೊರೆತಿರುವ ಬೆಳವಣಿಗೆಯ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಪರಾಧಿಗಳ ಪರ ವಕೀಲ ಎ.ಪಿ ಸಿಂಗ್ "ದೋಷಿಗಳನ್ನು ಎಂದಿಗೂ ಗಲ್ಲಿಗೇರಿಸುವುದಿಲ್ಲ ಎಂದು ಹೇಳುತ್ತಾರೆ. ನನ್ನ ಹೋರಾಟವನ್ನು ಮುಂದುವರೆಸುತ್ತೇವೆ, ಸರ್ಕಾರ ದೋಷಿಗಳನ್ನು ಗಲ್ಲಿಗೇರಿಸಲೇಬೇಕು ಎಂದು ಸಂತ್ರಸ್ತೆಯ ತಾಯಿ ಆಶಾ ದೇವಿ ಭಾವುಕರಾಗಿ ಹೇಳಿದ್ದಾರೆ. 

ನಮ್ಮ ಭರವಸೆಗಳು ಹುಸಿಯಾಗಿವೆ. ಅಪರಾಧಿಗಳಿಗೆ ಬದುಕುವ ಹಕ್ಕಿಲ್ಲ. ವ್ಯವಸ್ಥೆಯ ಬಗ್ಗೆ ನಮಗೆ ಬೇಸರವಿದೆ. ಆದರೆ ಅಪರಾಧಿಗಳನ್ನು ಗಲ್ಲಿಗೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಆಶಾ ದೇವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com