ನಾವು ಒಂದು ಕುಟುಂಬ, ಸಚಿನ್ ಪೈಲಟ್ ಗೆ ಬಾಗಿಲು ಎಂದೂ ತೆರೆದಿರುತ್ತದೆ: ಕಾಂಗ್ರೆಸ್ 

ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ, ಬಂಡಾಯ ಸಾರಿರುವ ಸಚಿನ್ ಪೈಲಟ್ ಗೆ ಬಾಗಿಲು ಎಂದೂ ತೆರೆದಿರುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ನಾವು ಒಂದು ಕುಟುಂಬ, ಸಚಿನ್ ಪೈಲಟ್ ಗೆ ಬಾಗಿಲು ಎಂದೂ ತೆರೆದಿರುತ್ತದೆ: ಕಾಂಗ್ರೆಸ್
ನಾವು ಒಂದು ಕುಟುಂಬ, ಸಚಿನ್ ಪೈಲಟ್ ಗೆ ಬಾಗಿಲು ಎಂದೂ ತೆರೆದಿರುತ್ತದೆ: ಕಾಂಗ್ರೆಸ್

ಜೈಪುರ: ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ, ಬಂಡಾಯ ಸಾರಿರುವ ಸಚಿನ್ ಪೈಲಟ್ ಗೆ ಬಾಗಿಲು ಎಂದೂ ತೆರೆದಿರುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಪಕ್ಷದ ಶಾಸಕರ ಸಭೆಗೂ ಮುನ್ನ ಮಾತನಾಡಿರುವ ಕಾಂಗ್ರೆಸ್ ನ ವಕ್ತಾರ ರಣ್ದೀಪ್ ಸುರ್ಜೆವಾಲ, "ಸಚಿನ್ ಪೈಲಟ್ ಹಾಗೂ ಇತರ ಶಾಸಕರಿಗೆ ಕಾಂಗ್ರೆಸ್ ನ ಬಾಗಿಲು ಎಂದಿಗೂ ತೆರೆದಿರುತ್ತದೆ ಎಂದು ಹೇಳಿದ್ದಾರೆ.

200 ಶಾಸಕರ ಸಂಖ್ಯಾಬಲವನ್ನು ಹೊಂದಿರುವ ರಾಜಸ್ಥಾನದ ವಿಧಾನಸಭೆಯಲ್ಲಿ ತಮಗೆ 30 ಶಾಸಕರ ಬೆಂಬಲವಿದೆ ಎಂದು ಬಂಡಾಯವೆದ್ದಿರುವ ಕಾಂಗ್ರೆಸ್ ನಾಯಕ, ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ.

ಸಚಿನ್ ಪೈಲಟ್ ಬಂಡಾಯದಿಂದ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಆದರೆ ನಿಗದಿಗಿಂತಲೂ 3 ಗಂಟೆಗಳು ತಡವಾಗಿ ಸಭೆ ಪ್ರಾರಂಭವಾಗಿದೆ. "109 ಶಾಸಕರ ಬೆಂಬಲ ಅಶೋಕ್ ಗೆಹ್ಲೋಟ್ ಸರ್ಕಾರದ ಪರವಾಗಿದ್ದು, ಸಚಿನ್ ಪೈಲಟ್ ಗೆ ಬಹುಮತ ಇಲ್ಲ" ಎಂದು ಕಾಂಗ್ರೆಸ್ ಹೇಳಿದೆ. 100 ಕ್ಕೂ ಹೆಚ್ಚು ಜನ ಶಾಸಕರು ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com