ಕೋಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿಯ ಹಿರಿಯ ಮುಖಂಡ ದೇಬೇಂದ್ರ ನಾಥ್ ರೇ ಅವರು ಸೋಮವಾರ ಬೆಳಿಗ್ಗೆ ಉತ್ತರ ದಿನಾಜ್ಪುರ ಜಿಲ್ಲೆಯ ಹೇಮತಾಬಾದ್ ಪ್ರದೇಶದ ತಮ್ಮ ಮನೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
"ಸೋಮವಾರ ಬೆಳಿಗ್ಗೆ ಹೇಮತಾಬಾದ್ ಪ್ರದೇಶದ ಅಂಗಡಿಯೊಂದರ ಬಳಿ ರೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ತನಿಖೆ ಪ್ರಾರಂಬವಾಗಿದೆ" ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಿಪಿಐ (ಎಂ) ಟಿಕೆಟ್ನಲ್ಲಿ ರೇ ಹೇಮತಾಬಾದ್ ವಿಧಾನಸಭಾ ವಿಭಾಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಕಾಯ್ದಿರಿಸಿದ ಸ್ಥಾನದಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ನಂತರ ಕಳೆದ ವರ್ಷ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ರೇ ಅವರನ್ನು ಮೊದಲು ಹತ್ಯೆ ಮಾಡಿ ನಂತರ ನೇಣಿಗೇರಿದ ರೀತಿ ಇರಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.
Advertisement