ಬಿಹಾರ ಸಿಎಂ ನಿತೀಶ್ ಕುಮಾರ್ ಉದ್ಘಾಟಿಸಿದ್ದ ಸೇತುವೆ ತಿಂಗಳಲ್ಲೇ ಕುಸಿತ!

ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ.
ಕುಸಿದು ಬಿದ್ದ ಸೇತುವೆ
ಕುಸಿದು ಬಿದ್ದ ಸೇತುವೆ

ಗೋಪಾಲ್ ಗಂಜ್: ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಕುಸಿದುಬಿದ್ದಿದೆ. ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ.

1.4 ಕಿಮೀ ಉದ್ದದ ಈ ಸತ್ತರ್​ಘಾಟ್ ಮಹಾಸೇತು ಸೇತುವೆಯನ್ನು ನಿರ್ಮಾಣ ಮಾಡಲು 8 ವರ್ಷಗಳು ತಗುಲಿದೆ. ಬಿಹಾರ್ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಸಂಸ್ಥೆ 264 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಿದೆ.

ಬಿಹಾರದಲ್ಲಿ ಇತ್ತೀಚೆಗೆ ಸುರಿದ ವ್ಯಾಪಕ ಮಳೆಯಿಂದಾಗಿ ಗಂಡಕ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಈ ಸೇತುವೆಯ ರಸ್ತೆಗೆ ಜೋಡಿಸುವ ಕಾಲುವೆಗೆ ನದಿ ನೀರಿನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ದುರ್ಬಲಗೊಂಡಿದೆ. ವಾಲ್ಮಿಕಿ ನಗರ್​ನಿಂದ ಮತ್ತಷ್ಟು ನೀರು ಬಿಡುಗಡೆಯಾದ ಬಳಿಕ ಈ ಕಾಲುವೆ ಕೊಚ್ಚಿಹೋಗಿ ಈ ದುರಂತ ಸಂಭವಿಸಿದೆ.

ಸತ್ತರ್​ಘಾಟ್ ಮಹಾಸೇತು ಈ ಭಾಗದ ಪ್ರಮುಖ ಸೇತುವೆಯಾಗಿದೆ. ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರಾಣ್ಯ ಮಧ್ಯೆ ಇದ್ದ ಪ್ರಮುಖ ಕೊಂಡಿಯಾಗಿದೆ. ಇದೇ ವೇಳೆ, ಸೇತುವೆ ಕುಸಿತ ಘಟನೆಯು ರಾಜಕೀಯ ವಾಗ್ಯುದ್ಧಕ್ಕೂ ಎಡೆ ಮಾಡಿಕೊಟ್ಟಿದೆ. ವಿಪಕ್ಷಗಳ ಮುಖಂಡರು ಸಿಎಂ ಮೇಲೆ ಎರಗಿಬಿದ್ದಿದ್ದಾರೆ. ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಝಾ ಅವರು ನಿತೀಶ್ ಕುಮಾರ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

“8 ವರ್ಷಗಳಿಂದ 263.47 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದ್ದ ಸತ್ತರ್​ಘಾಟ್ ಬ್ರಿಡ್ಜ್ ಅನ್ನು ನಿತೀಶ್​ಕುಮಾರ್ ಅವರು ಜೂನ್ 16ರಂದು ಉದ್ಘಾಟನೆ ಮಾಡಿದರು. 29 ದಿನಗಳ ನಂತರ ಅದು ಕುಸಿದುಬಿದ್ದಿದೆ. 263 ಕೋಟಿ ರೂ ಒಂದು ಮೇಲ್ನೋಟದ ವಿಚಾರ ಅಷ್ಟೇ. ಅವರ ಹೆಗ್ಗಣಗಳು ಈ ಹಣದ ಮೊತ್ತದಷ್ಟು ಮದ್ಯ ಕುಡಿದಿರುತ್ತವೆ” ಎಂದು ಮಾಜಿ ಡಿಸಿಎಂ ತೇಜಸ್ವಿ ಯಾದವ್ ವ್ಯಂಗ್ಯ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com