ಗಡಿಯಲ್ಲಿ ಭಾರತೀಯರ ಮೇಲೆ ನೇಪಾಳ ಪೊಲೀಸರಿಂದ ಗುಂಡಿನ ದಾಳಿ, ಓರ್ವನ ಸ್ಥಿತಿ ಗಂಭೀರ

ಬಿಹಾರದ ಕಿಸಾನ್ ಗಂಜ್ ನ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಪೊಲೀಸರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು ಓರ್ವ ಗಾಯಗೊಂಡಿದ್ದಾರೆ.
ನೇಪಾಳ
ನೇಪಾಳ

ನೇಪಾಳ: ಬಿಹಾರದ ಕಿಸಾನ್ ಗಂಜ್ ನ ಭಾರತ-ನೇಪಾಳ ಗಡಿಯಲ್ಲಿ ನೇಪಾಳ ಪೊಲೀಸರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು ಓರ್ವ ಗಾಯಗೊಂಡಿದ್ದಾರೆ. 

ಶನಿವಾರ ರಾತ್ರಿ ನೇಪಾಳ ಪೊಲೀಸರು ಮೂವರು ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಜೀತೇಂದ್ರ ಕುಮಾರ್ ಸಿಂಗ್ ಗೆ ಗುಂಡು ತಗುಲಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. 

ಮೂವರು ಭಾರತೀಯರ ಮೇಲೆ ನೇಪಾಳ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಶನ್ ಗಂಝ್ ಎಸ್ ಪಿ ಕುಮಾರ್ ಆಶೀಷ್ ತಿಳಿಸಿದ್ದಾರೆ. 

ನೇಪಾಳದಿಂದ ಈ ರೀತಿಯ ಕೃತ್ಯ ಇದೇ ಮೊದಲೆನಲ್ಲ. ಈ ಹಿಂದೆ ಭಾರತೀಯ ರೈತರ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಓರ್ವ ರೈತ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com