ನವದೆಹಲಿ: ಕೋವಿಡ್ -19 ಯುಗದಲ್ಲಿ ರಾಜಸ್ಥಾನ ಸರ್ಕಾರ ಪತನಗೊಳಿಸುವ ಪ್ರಯತ್ನ, ನಮಸ್ತೆ ಟ್ರಂಪ್ ಕಾರ್ಯಕ್ರಮಗಳು
ಕೇಂದ್ರ ಸರ್ಕಾರದ ಸಾಧನೆಗಳಲ್ಲಿ ಒಂದಾಗಿವೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮೋದಿ
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಇಂತಹ "ಸಾಧನೆಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ದೇಶವು ಈಗ 'ಆತ್ಮನಿರ್ಭರ್' ಆಗಿದೆ ಎಂದು ಹಿಂದಿಯಲ್ಲಿ ವ್ಯಂಗ್ಯ ಭರಿತ ಟ್ವೀಟ್ ನ್ನು ರಾಹುಲ್ ಗಾಂಧಿ ಮಾಡಿದ್ದಾರೆ.
ಕೊರೋನಾ ವೈರಸ್ ಬಿಕ್ಕಟ್ಟು ನಿರ್ವಹಣೆ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಸಾಂಕ್ರಾಮಿಕ ರೋಗವನ್ನು ಸರ್ಕಾರದ ಯೋಜನೆಯನ್ನು ಅವರು ಪ್ರಶ್ನಿಸಿದ್ದಾರೆ.
ಫೆಬ್ರವರಿಯಲ್ಲಿ- ನಮಸ್ತೆ ಟ್ರಂಪ್, ಮಾರ್ಚ್ - ಮಧ್ಯ ಪ್ರದೇಶ ಸರ್ಕಾರದ ಪತನ, ಏಪ್ರಿಲ್ - ಜನರಿಂದ ಮೊಂಬತ್ತಿ ಹಚ್ಚಿಸಿದದ್ದು, ಮೇ - ಸರ್ಕಾರದ ಆರನೇ ವರ್ಷಾಚರಣೆ, ಜೂನ್- ಬಿಹಾರ ವರ್ಚುವಲ್ ರ್ಯಾಲಿ; ಜುಲೈ- ರಾಜಸ್ಥಾನದ ಸರ್ಕಾರ ಪತನದ ಪ್ರಯತ್ನ ಕೋವಿಡ್ ಯುಗದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದೇ ಕಾರಣದಿಂದಾಗಿ ದೇಶ ಈಗ ಕೊರೋನಾ ವಿರುದ್ಧದ ಹೋರಾಟದಲ್ಲಿ ಆತ್ಮ ನಿರ್ಭರ್ ( ಸ್ವಾವಲಂಬಿ) ಆಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
Advertisement