ಚೀನಾ ಸಂಘರ್ಷ ವಿಚಾರದಲ್ಲಿ ರಾಜಕೀಯ ಮಾಡದಿರಿ: ರಾಹುಲ್ ಗಾಂಧಿಗೆ ಗಾಯಾಳು ಯೋಧನ ತಂದೆ 

ಭಾರತೀಯ ಸೇನೆ ಬಲಿಷ್ಠ ಸೇನೆಯಾಗಿದ್ದು, ಚೀನಾವನ್ನು ಸೋಲಿಸುವ ಶಕ್ತಿ ನಮ್ಮ ಸೇನೆಗಿದೆ. ಚೀನಾ ಸಂಘರ್ಷ ವಿಚಾರದಲ್ಲಿ ರಾಜಕೀಯ ಮಾಡದಿರಿ ಎಂದು ಗಾಲ್ವಾನ್ ನಲ್ಲಿ ನಡೆದ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯೋಧರೊಬ್ಬರ ತಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. 
ಗಾಯಾಳು ಯೋಧನ ತಂದೆ
ಗಾಯಾಳು ಯೋಧನ ತಂದೆ

ಆಳ್ವಾರ್: ಭಾರತೀಯ ಸೇನೆ ಬಲಿಷ್ಠ ಸೇನೆಯಾಗಿದ್ದು, ಚೀನಾವನ್ನು ಸೋಲಿಸುವ ಶಕ್ತಿ ನಮ್ಮ ಸೇನೆಗಿದೆ. ಚೀನಾ ಸಂಘರ್ಷ ವಿಚಾರದಲ್ಲಿ ರಾಜಕೀಯ ಮಾಡದಿರಿ ಎಂದು ಗಾಲ್ವಾನ್ ನಲ್ಲಿ ನಡೆದ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯೋಧರೊಬ್ಬರ ತಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. 

ಚೀನಾ ಗಡಿ ಸಂಘರ್ಷ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಹಾಗೂ ಟೀಕೆಗಳನ್ನು ಮಾಡುತ್ತಿರುವ ರಾಹುಲ್ ಅವರ ಹೇಳಿಕೆ ಕುರಿತು ಯೋಧನ ತಂಡೆ ವಿಡಿಯೋ ಸಂದೇಶ ನೀಡಿದ್ದಾರೆ. 

ಭಾರತೀಯ ಸೇನೆ ಬಲಿಷ್ಠ ಸೇನೆಯಲಾಗಿದ್ದು, ಚೀನಾ ಮಣಿಸುವ ಶಕ್ತಿ ಸೇನೆಗಿದೆ. ರಾಹುಲ್ ಗಾಂಧಿಯವರು ರಾಜಕೀಯ ಮಾಡಬಾರದು. ನನ್ನ ಪುತ್ರ ಸೇನೆಯಲ್ಲಿದ್ದು, ದೇಶಕ್ಕಾಗಿ ಹೋರಾಡುತ್ತಿದ್ದಾನೆ. ಈ ಹೋರಾಟ ಮುಂದೆಯೂ ಮುಂದುವರೆಯಲಿದೆ. ನನ್ನ ಪುತ್ರ ಶೀಘ್ರಗತಿಯಲ್ಲಿ ಗುಣಮುಖನಾಗಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com