ನೆಹರು ನಾಮಕರಣ ಮಾಡಿದ್ದ ಕೇರಳದ ಗ್ರಾಮದ ಚೀನಾ ಮುಕ್ಕು ಪ್ರದೇಶದ ಹೆಸರು ಬದಲಾವಣೆ ಮಾಡಲು ಗ್ರಾಮಸ್ಥರ ಪಟ್ಟು! 

ಚೀನಾ- ಭಾರತದ ನಡುವೆ ಗಲ್ವಾನ್ ಕಣಿವೆಯಲ್ಲಿ ಯುದ್ಧ ರೀತಿಯ ಸನ್ನಿವೇಶ ನಿರ್ಮಾಣವಾಗಿದ್ದರ ಬೆನ್ನಲ್ಲೇ ಕೇರಳದ ಗ್ರಾಮದಲ್ಲಿರುವ ಚೀನಾ ಮುಕ್ಕು ಎಂಬ ಪ್ರದೇಶದ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. 
ನೆಹರು ನಾಮಕರಣ ಮಾಡಿದ್ದ ಕೇರಳದ ಗ್ರಾಮದ ಚೀನಾ ಮುಕ್ಕು ಪ್ರದೇಶದ ಹೆಸರು ಬದಲಾವಣೆ ಮಾಡಲು ಗ್ರಾಮಸ್ಥರ ಪಟ್ಟು!
ನೆಹರು ನಾಮಕರಣ ಮಾಡಿದ್ದ ಕೇರಳದ ಗ್ರಾಮದ ಚೀನಾ ಮುಕ್ಕು ಪ್ರದೇಶದ ಹೆಸರು ಬದಲಾವಣೆ ಮಾಡಲು ಗ್ರಾಮಸ್ಥರ ಪಟ್ಟು!

ತಿರುವನಂತಪುರಂ: ಚೀನಾ- ಭಾರತದ ನಡುವೆ ಗಲ್ವಾನ್ ಕಣಿವೆಯಲ್ಲಿ ಯುದ್ಧ ರೀತಿಯ ಸನ್ನಿವೇಶ ನಿರ್ಮಾಣವಾಗಿದ್ದರ ಬೆನ್ನಲ್ಲೇ ಕೇರಳದ ಗ್ರಾಮದಲ್ಲಿರುವ ಚೀನಾ ಮುಕ್ಕು ಎಂಬ ಪ್ರದೇಶದ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. 

ಈ ಗ್ರಾಮದಲ್ಲಿರುವ ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂಬ ಹೆಸರನ್ನು ನೀಡಿದ್ದು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು!  1952 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಕೇರಳದ ಈ ಗ್ರಾಮಕ್ಕೆ ಭೇಟಿ ನೀಡಿದ್ದ ನೆಹರು ಅವರಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಮ್ಯುನಿಸ್ಟರ ಕೆಂಪು ಬಣ್ಣದ ಧ್ವಜಗಳೇ ರಾರಾಜಿಸುತ್ತಿದ್ದವು. ಇದನ್ನು ಗಮನಿಸಿದ ನೆಹರು ಈ ಪ್ರದೇಶವನ್ನು ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂದು ಕರೆದಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಹೆಸರು ಈ ಪ್ರದೇಶಕ್ಕೆ ಅಂಟಿಕೊಂಡಿದೆ. ಈಗ ಚೀನಾದೊಂದಿಗಿನ ಘರ್ಷಣೆಯ ಬೆನ್ನಲ್ಲೇ ಕೇರಳದ ಗ್ರಾಮಸ್ಥರು ಈ ಹೆಸರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಹೆಸರು ಬದಲಾವಣೆ ಸಂಬಂಧ ನಿರ್ಣಯ ಮಂಡಿಸಿದ್ದೇವೆ, ಇದಕ್ಕಾಗಿ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶದಲ್ಲಿ ಯುದ್ಧದ ರೀತಿಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಯೋಧರ ಬಲಿದಾನವನ್ನು ಗೌರವಿಸಿ ಹೆಸರು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪಂಚಾಯತ್ ನ ಅಧ್ಯಕ್ಷರಾದ ಎಂ ರಜನಿ ಮಾತನಾಡಿ, ಶೀಘ್ರದಲ್ಲೇ ನಡೆಯಲಿರುವ ಪರಿಷತ್ ಸಭೆಯಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com