ದೆಹಲಿ ಪೊಲೀಸರ ಚಿತ್ರ
ದೆಹಲಿ ಪೊಲೀಸರ ಚಿತ್ರ

ವದಂತಿಗಳನ್ನು ಹರಡಬೇಡಿ: ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಮನವಿ

ರಾಷ್ಟ್ರ  ರಾಜಧಾನಿಯಲ್ಲಿ ಶಾಂತಿಗೆ ಭಂಗ ತರುವ, ಕೋಮುಸೌಹಾರ್ದತೆಗೆ ಭಂಗ ತರುವಂತಹ ವದಂತಿಗಳನ್ನು ಹರಡದಂತೆ  ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಸಾರ್ವಜನಿಕರಲ್ಲಿ ಇಂದು ಮನವಿ ಮಾಡಿಕೊಂಡಿದ್ದಾರೆ.

ನವದೆಹಲಿ: ರಾಷ್ಟ್ರ  ರಾಜಧಾನಿಯಲ್ಲಿ ಶಾಂತಿಗೆ ಭಂಗ ತರುವ, ಕೋಮುಸೌಹಾರ್ದತೆಗೆ ಭಂಗ ತರುವಂತಹ ವದಂತಿಗಳನ್ನು ಹರಡದಂತೆ  ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಸಾರ್ವಜನಿಕರಲ್ಲಿ ಇಂದು ಮನವಿ ಮಾಡಿಕೊಂಡಿದ್ದಾರೆ.

ದೆಹಲಿಯ ಅನೇಕ ಕಡೆಗಳಲ್ಲಿ ಗಲಭೆಯ ಬಗೆಗಿನ ವದಂತಿಗಳ ಹಿನ್ನೆಲೆಯಲ್ಲಿ ನಾಗರಿಕರು ಆತಂಕಗೊಂಡ ಬೆನ್ನಲ್ಲೇ ಅವರು ಈ ರೀತಿಯ ಮನವಿ ಮಾಡಿಕೊಂಡಿದ್ದಾರೆ.

ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗಳಿಂದ ಬರುವ ವದಂತಿಗಳನ್ನು ಜನರು ಪರಿಶೀಲಿಸಬೇಕು, ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ  ವದಂತಿಗಳ ಬಗ್ಗೆ ನಿಗಾ ವಹಿಸಲಾಗಿದೆ    ಎಂದು ಶ್ರೀವಾಸ್ತವ ಹೇಳಿದ್ದಾರೆ.

ವದಂತಿಗಳಿಗೆ ಸಂಬಂಧಿಸಿದಂತೆ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಚಾರಣೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com