ನವದೆಹಲಿ: ಮಾರ್ಚ್ 20 ನಮ್ಮ ಜೀವನದ ಅತ್ಯಂತ ಮಹತ್ವದ ದಿನವಾಗಲಿದ್ದು, ಅದಕ್ಕಾಗಿ ಎದುರು ನೋಡುತ್ತಿರುವುದಾಗಿ, ದೆಹಲಿ ಕೋರ್ಟ್ ನಿರ್ಭಯಾ ಹಂತಕರಿಗೆ ಹೊಸ ಡೆತ್ ವಾರೆಂಟ್ ಜಾರಿ ಮಾಡಿದ ಬಳಿಕ ನಿರ್ಭಯಾ ತಾಯಿ ಆಶಾದೇವಿ ಅವರು ಹೇಳಿದ್ದಾರೆ.
ನಾಲ್ಕು ಕಾಮುಕರಿಗೆ ಮಾರ್ಚ್ 20ರಕ್ಕೆ ಹೊಸ ಡೆತ್ ವಾರೆಂಟ್ ಜಾರಿ ಮಾಡಿರುವ ದೆಹಲಿ ಕೋರ್ಟ್ ಕ್ರಮವನ್ನು ಸ್ವಾಗತಿಸಿರುವ ಆಶಾದೇವಿ, ನಾಲ್ವರೂ ಅಪರಾಧಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಪರಾಧಿಗಳನ್ನು ನೇಣಿಗೆ ಹಾಕುವವರೆಗೆ ನಮ್ಮ ಹೋರಾಟ ನಡೆಯಲಿದೆ. ಮಾರ್ಚ್ 20ರಂದು ಅಪರಾಧಿಗಳನ್ನು ನೇಣಿಗೇರಿಸುವ ವಿಶ್ವಾಸವಿದೆ ಎಂದು ಆಶಾದೇವಿ ತಿಳಿಸಿದ್ದಾರೆ.
ತಮಗೆ ಕಾನೂನಿನ ಮೇಲೆ ಸಂಪೂರ್ಣ ಭರವಸೆಯಿದ್ದು, ಈ ಬಾರಿ ಜಾರಿ ಮಾಡಲಾಗಿರುವ ಡೆತ್ ವಾರೆಂಟ್ ಕೊನೆಯದ್ದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅಲ್ಲದೇ ಹೊಸ ಡೆತ್ ವಾರೆಂಟ್ ಅನ್ವಯ ಮಾ.20ರಂದು ಗಲ್ಲುಶಿಕ್ಷೆ ಜಾರಿಯಾಗುವುದನ್ನು ತಾವು ಎದುರು ನೋಡುತ್ತಿರುವುದಾಗಿ ಆಶಾದೇವಿ ಹೇಳಿದ್ದಾರೆ.
Advertisement