ತೆಲಂಗಾಣ: ನಿವೃತ್ತ ಪೊಲೀಸ್ ಅಧಿಕಾರಿ ಕೊಂದು, ಸೆಲ್ಫೀ ತೆಗದುಕೊಂಡ ಆರೋಪಿ!

ನಿವೃತ್ತ ಪೊಲೀಸ ಅಧಿಕಾರಿಯನ್ನು ಹತ್ಯೆಗೈದು, ಮೃತದೇಹದ ಮುಂದೆ ನಿಂತು ಆರೋಪಿಯೊಬ್ಬ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. 
ತೆಲಂಗಾಣ: ನಿವೃತ್ತ ಪೊಲೀಸ್ ಅಧಿಕಾರಿ ಕೊಂದು, ಸೆಲ್ಫೀ ತೆಗದುಕೊಂಡ ಆರೋಪಿ!
ತೆಲಂಗಾಣ: ನಿವೃತ್ತ ಪೊಲೀಸ್ ಅಧಿಕಾರಿ ಕೊಂದು, ಸೆಲ್ಫೀ ತೆಗದುಕೊಂಡ ಆರೋಪಿ!

ಹೈದರಾಬಾದ್: ನಿವೃತ್ತ ಪೊಲೀಸ ಅಧಿಕಾರಿಯನ್ನು ಹತ್ಯೆಗೈದು, ಮೃತದೇಹದ ಮುಂದೆ ನಿಂತು ಆರೋಪಿಯೊಬ್ಬ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. 

ಶಿವರಾಜ್ ಮೃತಪಟ್ಟಿರುವ ನಿವೃದ್ಧ ಸಹಾಯಕ ಎಎಸ್ಐ ಎಂದು ಗುರ್ತಿಸಲಾಗಿದೆ. ಆರೋಪಿಯ ಹೆಸರು ವಿವೇಕ್ ಎಂದು ತಿಳಿದುಬಂದಿದೆ. 

ಮೃತ ಶಿವರಾಜ್ ಹಾಗೂ ಜಯರಾಜ್ ಎಂಬುವವರ ನಡುವೆ ಭೂ ವಿವಾದ ಏರ್ಪಟ್ಟಿತ್ತು. ಇದರಂತೆ ಶುಕ್ರವಾರ ಜಯರಾತ್ ಪುತ್ರರಾದ ವಿವೇಕ್ ಹಾಗೂ ಮನೋಜ್ ಎಂಬುವವರು ಶಿವರಾಜ್ ಮನೆಗೆ ಬಂದು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ತೀವ್ರ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಿವೇಕ್ ಎಂಬಾದ ರಾಡ್ ನಿಂದ ಶಿವರಾಜ್ ತಲೆಗೆ ಬಲವಾಗಿ ಹೊಡೆದಿದ್ದಾನೆ. 

ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಶಿವರಾಜ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ವಿವೇಕ್ ಮೃತದೇಹದ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಇದೀಗ ಆರೋಪಿಗಳಾದ ಮನೋಜ್, ವಿವಾಕ್ ಹಾಗೂ ಅವರ ತಾಯಿ ವನಜಾ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com