ತಿರುಮಲ: ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಶುಕ್ರವಾರ ಪ್ರಕಟಿಸಿದೆ.
ತಿರುಮಲದಲ್ಲಿನ ಧರ್ಮಗಿರಿ ವೇದ ಪಾಠ ಶಾಲೆಯಲ್ಲಿ ಶ್ರೀನಿವಾಸ ಶಾಂತ್ಯೋತ್ಸವ ಸಹಿತ ಧನ್ವಂತರಿ ಯಾಗ ನಡೆಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್ನಿಂದ ಇಡೀ ಜಗತ್ತು ಭಯ ಭೀತಗೊಂಡಿದೆ. ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಅತ್ಯಂತ ಶಕ್ತಿಶಾಲಿಯಾದ ಧನ್ವಂತರಿ ಶ್ರೀ ಮಹಾ ವಿಷ್ಣುವಿನ ಒಂದು ರೂಪವಾಗಿದ್ದಾನೆ. ಈ ಯಾಗ ನಡೆಸುವ ಮೂಲಕ ಮಾನವನಿಗೆ ಒದಗಿರುವ ಸಂಕಷ್ಟ ತರುವ ವ್ಯಾಧಿಗಳು ಪರಿಹಾರಗೊಳ್ಳಲಿವೆ ಎಂದು ನಂಬಲಾಗುತ್ತದೆ.
Advertisement