ಕೊರೋನಾ ಪಿಡುಗಿನ ವಿರುದ್ಧ ಹೋರಾಡಲು ಜನತಾ ಕರ್ಫ್ಯೂ ಬಲ ನೀಡಲಿ: ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಯೊಂದಿಗೆ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಆರಂಭವಾಗಿದೆ. 
ಮೋದಿ
ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಯೊಂದಿಗೆ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಆರಂಭವಾಗಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಜನತಾ ಕರ್ಫ್ಯೂ ದೇಶದಾದ್ಯಂತ ಆರಂಭಗೊಂಡಿದೆ. ಈ ಕರ್ಫ್ಯೂ ಕೊರೋನಾ ವೈರಸ್ ಎಂಬ ಪಿಡುಗಿನ ವಿರುದ್ಧ ಹೋರಾಡಲು ಶಕ್ತಿ ನೀಡಲಿ. ನಮ್ಮ ಈ ಕ್ರಮಯ ಸಮಯಕ್ಕೆ ಸಹಾಯಕವಾಗಲಿದೆ ಎಂದು ಹೇಳಿದದಾರೆ. 

ಕೊರೋನಾ ವೈರಸ್ ದೇಶದಾದ್ಯಂತ ತಾಂಡವವಾಡಲು ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ತಡೆಯಲು ಮೋದಿಯವರು ಮಾರ್ಚ್ 22ರಂದು ಜನತಾ ಕರ್ಫ್ಯೂ ಆಚರಣೆ ಮಾಡಲು ಕರೆ ನೀಡಿದ್ದರು. ಮೋದಿಯವರ ಈ ಆಂದೋಲನ ಕರೆಗೆ ದೇಶದಾದ್ಯಂತ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಎಲ್ಲೆಡೆ ಬಂದ್ ವಾತಾವರಣ ನಿರ್ಮಾಣಗೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com