ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಸಂತರ ಸ್ತುತಿಗೀತೆ ಮತ್ತು ವೈದಿಕ ಶ್ಲೋಕಗಳು, ಜಪಗಳ ನಡುವೆ ಗರ್ಭ ಗೃಹದಿಂದ 'ರಾಮ್ ಲಲ್ಲಾ' ಮತ್ತು ಇತರ ವಿಗ್ರಹಗಳನ್ನು ಬುಧವಾರ ರಾಮ ಜನ್ಮಭೂಮಿಯ ಮನಸ್ ಭವನದ ಬಳಿ ತಾತ್ಕಾಲಿಕ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು.
ರಾಮ ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೆ ವಿಗ್ರಹಗಳು ಬುಲೆಟ್ ಪ್ರೂಫ್ ತಾತ್ಕಾಲಿಕ ಮಂದಿರದಲ್ಲಿ ಇರುತ್ತವೆ. ಹೊಸ ತಾತ್ಕಾಲಿಕ ಮಂದಿರ ಹಳೆಯ ಟೆಂಟ್ ತಾತ್ಕಾಲಿಕ ದೇವಾಲಯದಿಂದ 250 ಮೀಟರ್ ದೂರದಲ್ಲಿದೆ.
Advertisement