ಅಂತ್ಯಸಂಸ್ಕಾರಕ್ಕೆ ಬಾರದ ಕುಟುಂಬಸ್ಥರು: ಕೊರೋನಾ ಪೀಡಿತನ ಅಂತ್ಯಕ್ರಿಯೆ ನೆರವೇರಿಸಿದ ಹೆಲ್ತ್ ವರ್ಕರ್ಸ್

ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಕೊರೊನಾ ವೈರಸ್ ಪೀಡಿತ ವೃದ್ಧನೋರ್ವ ಮೃತಪಟ್ಟಿದ್ದು, ಕುಟುಂಬ ಮತ್ತು ಆಪ್ತರ ಅನುಪಸ್ಥಿತಿಯಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರೇ ಶವಸಂಸ್ಕಾರ ನಡೆಸಿದ ಘಟನೆ ನಡೆದಿದೆ.
ವೃದ್ಧನ ಅಂತ್ಯಕ್ರಿಯೆ
ವೃದ್ಧನ ಅಂತ್ಯಕ್ರಿಯೆ

ಹೈದರಾಬಾದ್:  ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಕೊರೊನಾ ವೈರಸ್ ಪೀಡಿತ ವೃದ್ಧನೋರ್ವ ಮೃತಪಟ್ಟಿದ್ದು, ಕುಟುಂಬ ಮತ್ತು ಆಪ್ತರ ಅನುಪಸ್ಥಿತಿಯಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರೇ ಶವಸಂಸ್ಕಾರ ನಡೆಸಿದ ಘಟನೆ ನಡೆದಿದೆ.

ಕೊರೊನಾ ವೈರಸ್‌ನಿಂದ ಮೃತಪಟ್ಟ 74 ವರ್ಷದ ವೃದ್ಧನ ಇಡೀ ಕುಟುಂಬ ಗೃಹ ಬಂಧನದಲ್ಲಿದ್ದು, ಪರಿಣಾಮವಾಗಿ ಅವರು ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ತೆಲಂಗಾಣದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದ್ದು, ವೃದ್ಧ ಸಾವನ್ನಪ್ಪಿದ ಬಳಿಕ ಆತನಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೃತ ವೃದ್ಧನ ಕುಟುಂಬಸ್ಥರು ಹಾಗೂ ಆಪ್ತರ ಅನುಪಸ್ಥಿತಿಯಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರೇ ನೆರವೇರಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಮೃತ ವ್ಯಕ್ತಿಯ ಶವಸಂಸ್ಕಾರದಲ್ಲಿ 20ಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com