ವೈದ್ಯನ ಆತ್ಮಹತ್ಯೆ ಪ್ರಕರಣ  ಆಪ್ ಶಾಸಕ ಬಂಧನ

ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. 
ವೈದ್ಯನ ಆತ್ಮಹತ್ಯೆ ಪ್ರಕರಣ  ಆಪ್ ಶಾಸಕ ಬಂಧನ
ವೈದ್ಯನ ಆತ್ಮಹತ್ಯೆ ಪ್ರಕರಣ  ಆಪ್ ಶಾಸಕ ಬಂಧನ

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕ ಪ್ರಕಾಶ್ ಜರ್ವಾಲ್ ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. 

ದಕ್ಷಿಣ ದೆಹಲಿ ದುರ್ಗಾ ವಿಹಾರದಲ್ಲಿ ಕಳೆದ ತಿಂಗಳು ವೈದ್ಯರೊಬ್ಬರು ಆತ್ಮಹತ್ಯೆ ಪ್ರಕರಣದಲ್ಲಿ ಪ್ರಕಾಶ್ ಜರ್ವಾಲ್ ಹಾಗೂ  ಅವರ ಸಹಚರ ಕಪಿಲ್ ನಗರ್ ನನ್ನು, ಕೂಡಾ ಪೊಲೀಸರು ಬಂಧಿಸಿದ್ದಾರೆ. 

ಡಾಕ್ಟರ್ ರಾಜೇಂದ್ರ ಸಿಂಗ್ (52) ಏಪ್ರಿಲ್ 18ರಂದು ದುರ್ಗಾ ವಿಹಾರ್ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರು ಬರೆದಿರಿಸಿದ್ದ ಆತ್ಮಹತ್ಯೆ ನೋಟ್ ನಲ್ಲಿ, ತಾನು ಜೀವ ಕಳೆದುಕೊಳ್ಳಲು ಕಾರಣ ಶಾಸಕ ಪ್ರಕಾಶ್ ಎಂದು ಬರೆದಿದ್ದರು. ಇದರಿಂದ ಪ್ರಕಾಶ್ ವಿರುದ್ದ ಪ್ರಕರಣ ದಾಖಲಾಗಿದೆ.  

ಒತ್ತಾಯದ ಹಣ ವಸೂಲಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿದೆ ಎಂಬ ಆರೋಪ ಹೊರಿಸಲಾಗಿದೆ. ದೆಹಲಿ  ವಿಧಾನಸಭೆಯ ಸದಸ್ಯರಾಗಿರುವ ಪ್ರಕಾಶ್ ಜರ್ವಾಲ್, ಶುಕ್ರವಾರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಈ ಕುರಿತು ದೆಹಲಿ ಹೈಕೋರ್ಟ್ ಈ ತಿಂಗಳ 11ರಂದು ವಿಚಾರಣೆ ನಡೆಸಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com