ಉತ್ತರ ಪ್ರದೇಶ: ಎಸ್‍ಪಿ ಪಕ್ಷದ ಮುಖಂಡ, ಪುತ್ರನಿಗೆ ಗುಂಡಿಟ್ಟು ಭೀಕರ ಹತ್ಯೆ, ವಿಡಿಯೋ!

ಉತ್ತರಪ್ರದೇಶದ ಸಾಂಭಾಲ್ ನಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಪುತ್ರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಸಾಂಭಾಲ್: ಉತ್ತರಪ್ರದೇಶದ ಸಾಂಭಾಲ್ ನಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಪುತ್ರನನ್ನು ಗುಂಡಿಟ್ಟು ಹತ್ಯೆ ಮಾಡಿದ್ದು ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 

ನರೇಗಾ ಯೋಜನೆಯಡಿಯಲ್ಲಿ ಇಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಇಬ್ಬರು ಹತ್ಯೆಯಾಗಿದ್ದಾರೆ. 

ಹಳ್ಳಿಯ ಗದ್ದೆ ಮೂಲಕ ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ಪರಿಶೀಲಿಸಲು ಸಮಾಜವಾದಿ ಪಕ್ಷದ ನಾಯಕ ಛೋಟೆ ಲಾಲ್ ದಿವಾಕರ್ ಮತ್ತು ಆತನ ಪುತ್ರ ಸುನೀಲ್ ಬಂದಿದ್ದರು. ಈ ವೇಳೆ ಅದೇ ಗ್ರಾಮದವರ ಜತೆ ಜಗಳವಾಗಿದೆ. ಇಬ್ಬರು ಗ್ರಾಮಸ್ಥರ ಬಳಿ ಬಂದೂಕು ಇದ್ದಿದ್ದರಿಂದ ಮಾತಿನ ಚಕಮಿಕಿಯಲ್ಲಿ ದಿವಾಕರ್ ಹಾಗೂ ಸುನೀಲ್ ಮೇಲೆ ಗುಂಡು ಹಾರಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. 

ಮೃತ ದಿವಾಕರ್ ಪತ್ನಿ ಶಮ್ಸೋಯ್ ಗ್ರಾಮದ ಮುಖ್ಯಸ್ಥೆಯಾಗಿದ್ದಾರೆ. ದಿವಾಕರ್ ಮತ್ತು ಸುನೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನು ಬಂಧಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com