ಭೋಪಾಲ್: ಭೋಪಾಲ್ ಲೋಕಸಭಾ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ "ಕಾಣೆಯಾಗಿದ್ದಾರೆ" ಎಂದು ಹಲವೆಡೆಗಳಲ್ಲಿ ಪೋಸ್ಟರ್ ಗಳು, ಬ್ಯಾನರ್ ಗಳು ರಾರಾಜಿಸಿದ್ದ ಬೆನ್ನಲ್ಲೇ ಪ್ರಜ್ಞಾ ಸಿಂಗ್ ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಕೊರೋನಾವೈರಸ್ ಏಕಾಏಕಿಯಿಂದ ಗರವು ತತ್ತರಿಸುತ್ತಿದ್ದರೂ ಬಿಜೆಪಿ ಸಂಸದರು ನಾಪತ್ತೆಯಾಗಿದ್ದಾರೆಎಂದು ಅನಾಮಧೇಯ ಪೋಸ್ಟರ್ಗಳು ಭೋಪಾಲ್ ನ ವಿವಿಧೆಡೆ ಕಂಡು ಬದಿದೆ.
ಏತನ್ಮಧ್ಯೆ, ಠಾಕೂರ್ ನಗರದ ಭೈರಾಗರ್ ಚಿಚ್ಲಿ ಪ್ರದೇಶದಲ್ಲಿ ಸಹಕಾರ ಭಾರತಿ ನಡೆಸುತ್ತಿರುವ ಮೊಬೈಲ್ ಆಸ್ಪತ್ರೆ ಸೇವೆಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಮಾತನಾಡಿ ಠಾಕೂರ್ ಕಾಣೆಯಾಗಿಲ್ಲ, ಅವರು ಅನಾರೋಗ್ಯಕ್ಕೀಡಾಗಿದ್ದು ದೆಹಲಿಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ. ಮೇಲಾಗಿ ಕಾರ್ಯಕರ್ತರ ಜೊತೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಎಂದಿದ್ದಾರೆ.
ಬಜೆಪಿ ವಕ್ತಾರ ರಾಹುಲ್ ಕೊತಾರಿ ಮಾತನಾಡಿ ಸಂಸದರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆ ಹೊಂದುತ್ತಿದ್ದಾರೆ. ಈ ನಡುವೆ ಅವರು ಕ್ಷೇತ್ರದಲ್ಲಿನ ಜನರಿಗೆ ಅಗತ್ಯ ನೆರವನ್ನೂ ನೀಡುತ್ತಿದ್ದಾರೆ ಎಂದು ಸ್ಪಷ್ಟನೆ ಕೊಟ್ತಿದ್ದಾರೆ.
Advertisement