ಆಂಧ್ರಪ್ರದೇಶದ ಕಡಪದಲ್ಲಿ ರಸ್ತೆ ಅಪಘಾತ: ಕೆಂಪು ಮರಳನ್ನು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಸಜೀವ ದಹನ

ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವಲ್ಲೂರು ಮಂಡಲ್ ನ ಗೊಟೂರು ಎಂಬ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೆಂಪು ಮರಳು ಕಳ್ಳಸಾಗಣೆದಾರರು ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಡಪದಲ್ಲಿ ಅಪಘಾತಕ್ಕೀಡಾದ ಕಾರು
ಕಡಪದಲ್ಲಿ ಅಪಘಾತಕ್ಕೀಡಾದ ಕಾರು

ಕಡಪ: ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ವಲ್ಲೂರು ಮಂಡಲ್ ನ ಗೊಟೂರು ಎಂಬ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೆಂಪು ಮರಳು ಕಳ್ಳಸಾಗಣೆದಾರರು ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸ್ಕಾರ್ಪಿಯೊ ವಾಹನದಲ್ಲಿ ನಾಲ್ವರು ಕಳ್ಳಸಾಗಣೆದಾರರು ಕೆಂಪು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆಯಿತು. ಆಗ ಇಂಧನ ತುಂಬಿದ್ದ ಟ್ಯಾಂಕ್ ಗೆ ಬೆಂಕಿ ಹತ್ತಿಕೊಂಡು ಜ್ವಾಲೆ ವ್ಯಾಪಕವಾಗಿ ಹೊತ್ತಿ ಉರಿಯಿತು.

ಆಗ ಮತ್ತೊಂದು ಕಾರು ಬಹುಶಃ ಕಳ್ಳಸಾಗಣೆದಾರರಾಗಿದ್ದಿರಬೇಕು, ಹಿಂದಿನಿಂದ ಬರುತ್ತಿದ್ದುದು ಸ್ಕಾರ್ಪಿಯೊಗೆ ಡಿಕ್ಕಿ ಹೊಡೆಯಿತು. ಸ್ಕಾರ್ಪಿಯೊದಲ್ಲಿದ್ದ ಚಾಲಕ ಮತ್ತು ಇತರ ಮೂವರು ಹೊತ್ತಿ ಉರಿದು ಸಜೀವ ದಹನವಾದರು. ಮತ್ತೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.

ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಕೇಸು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com