ಕೊರೋನಾ ಸಾಂಕ್ರಾಮಿಕ ಎಫೆಕ್ಟ್: ಪಟಾಕಿ ನಿಷೇಧಿಸಿದ ರಾಜಸ್ಥಾನ ಸರ್ಕಾರ

ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮಹತ್ವದ ಬೆಳವಣಿಗೆಯಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟವನ್ನು ನಿಷೇಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಇತ್ತ ಮಹತ್ವದ ಬೆಳವಣಿಗೆಯಲ್ಲಿ ರಾಜಸ್ಥಾನ ಸರ್ಕಾರ ಪಟಾಕಿ ಮಾರಾಟವನ್ನು ನಿಷೇಧಿಸಿದೆ.

ಕೋವಿಡ್ 19 ಸೋಂಕಿಗೆ ತುತ್ತಾದ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಸಾಮಾನ್ಯವಾಗಿರುವುದರಿಂದ ಅವರ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕರಿಗೆ ಅನಾರೋಗ್ಯ ತಂದೊಡ್ಡಲಿರುವ ಹಿನ್ನೆಲೆಯಲ್ಲಿ ಸಿಡಿಮದ್ದು(ಪಟಾಕಿ) ಮಾರಾಟ ನಿಷೇಧಿಸಲಾಗಿದೆ ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್   ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅಶೋಕ್ ಗೆಹ್ಲೂಟ್ ಅವರು, 'ಸಿಡಿಮದ್ದು ಸಿಡಿಸುವ ಮೂಲಕ ಕಲುಷಿತ ವಾತಾವರಣದಿಂದ ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿರುವ ನಿಟ್ಟಿನಲ್ಲಿ ಸಿಡಿಮದ್ದು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.  ಒಂದು ವೇಳೆ ಆದೇಶ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡಿದಲ್ಲಿ ಅಂತಹವರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

'ಪಟಾಕಿ ಸಿಡಿಸುವ ವಿಷಕಾರಿ ಹೊಗೆಯಿಂದಾಗಿ ಕೋವಿಡ್ -19 ಸೋಂಕಿತ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ, ರಾಜ್ಯದಲ್ಲಿ ಪಟಾಕಿಗಳ ಮಾರಾಟ ಮತ್ತು ಪಟಾಕಿಗಳನ್ನು ನಿಷೇಧಿಸಲು ಮತ್ತು ಫಿಟ್‌ನೆಸ್ ಇಲ್ಲದ ಹೊಗೆರಹಿತ ವಾಹನಗಳ ಮೇಲೆ ನಿಷೇಧ ಹೇರಲು ಕಠಿಣ ಕ್ರಮ  ಕೈಗೊಳ್ಳಲಾಗಿದೆ. ಕೊರೋನಾ ಸಾಂಕ್ರಾಮಿಕದ ಈ ಸವಾಲಿನ ಸಮಯದಲ್ಲಿ, ಜನರ ಜೀವಗಳನ್ನು ರಕ್ಷಿಸುವುದು ಸರ್ಕಾರಕ್ಕೆ ಅತ್ಯುನ್ನತವಾಗಿದೆ. ರಾಜ್ಯದಲ್ಲಿ ಕೋವಿಡ್ -19 ಸೋಂಕಿನ ಸ್ಥಿತಿ, 'ಮಾಸ್ಕ್-ನೋ ಎಂಟ್ರಿ' ಮತ್ತು 'ವಾರ್ ಫಾರ್ ಪ್ಯೂರ್' ಅಭಿಯಾನವನ್ನು ನಿವಾಸದಲ್ಲಿ ಪರಿಶೀಲಿಸಲಾಗಿದೆ. ಅನ್ಲಾಕ್ -6  ಮಾರ್ಗಸೂಚಿಗಳನ್ನು ಸಹ ಚರ್ಚಿಸಲಾಯಿತು ಮತ್ತು ಸಭೆಯಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿದೆ. 

ಅಭಿವೃದ್ಧಿ ಹೊಂದಿದ ದೇಶಗಳಾದ ಜರ್ಮನಿ, ಯುಕೆ, ಫ್ರಾನ್ಸ್, ಇಟಲಿ, ಸ್ಪೇನ್‌ನಲ್ಲಿ ಕೊರೋನದ ಎರಡನೇ ಅಲೆ ಪ್ರಾರಂಭವಾಗಿದೆ. ಅನೇಕ ದೇಶಗಳನ್ನು ಮರು ಲಾಕ್ ಡೌನ್ ಮಾಡಲು ಒತ್ತಾಯಿಸಲಾಗಿದೆ. ಅಂತಹ ಪರಿಸ್ಥಿತಿ ನಮ್ಮಲ್ಲಿಯೂ ಉದ್ಭವಿಸದಿದ್ದಲ್ಲಿ, ನಾವು ಸಹ ಜಾಗರೂಕರಾಗಿರಬೇಕು. ರಾಜ್ಯದ 2000  ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಪರೀಕ್ಷೆಯ ಫಲಿತಾಂಶದಲ್ಲಿ, ಆಯ್ದ ವೈದ್ಯರು 10 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಮತ್ತು ಶೀಘ್ರದಲ್ಲೇ ನೇಮಕಾತಿ ನೀಡಬೇಕು. ಕರೋನಾ ಸೇರಿದಂತೆ ಇತರ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದು ಸಹಾಯ  ಮಾಡುತ್ತದೆ ಎಂದು ಗೆಹ್ಲೂಟ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ದೆಹಲಿ ಸರ್ಕಾರ ಕೂಡಾ ದೀಪಾವಳಿ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಸಿರು ಪಟಾಕಿ ಮಾತ್ರ ಉಪಯೋಗಿಸುವಂತೆ ಆದೇಶ ನೀಡಿದ್ದು, ಒಂದು ವೇಳೆ ಸಿಡಿಮದ್ದು ಮಾರಾಟ ಕಂಡುಬಂದಲ್ಲಿ ದುಬಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com